Posts

Showing posts from November, 2024

" ಕಾಡಾನೆ ದಾಳಿಯಿಂದ ರೈತ ಭೀಕರವಾಗಿ ಸಾವು"

Image
" ಕಾಡಾನೆಯ ಭೀಕರ ದಾಳಿಯಿಂದಾಗಿ ರೈತ ಹೀನಾಯವಾಗಿ ಸಾವು"   ಚಿಕ್ಕಮಗಳೂರು : ಜಿಲ್ಲೆಯ ನರಸಿಂಹರಾಜಪುರ ತಾಲ್ಲೂಕಿನ ಸೀತೂರು ಗ್ರಾಮ ಪಂಚಾಯಿತಿಯ ಹಿಂಬದಿಯಲ್ಲಿ ಕುದುರೆಗುಂಡಿ ಸಮೀಪ ಕಾಡಾನೆ ದಾಳಿಗೆ ಒಬ್ಬ ರೈತ ಹೀನಾಯವಾಗಿ ಬಲಿಯಾಗಿದ್ದು ಅತ್ಯಂತ ಅಮಾನುಷ ಹಾಗೂ ಭೀಕರವಾಗಿ ಸಾವನ್ನಪ್ಪಿದ್ದಾನೆ.                                  ಇತ್ತೀಚಿನ ಕಳೆದೊಂದೆರಡು ವಾರಗಳಲ್ಲಿ ಕಾಡಾನೆಯ ಗುಂಪು ಗುಂಪಾಗಿ ಚಿಕ್ಕಮಗಳೂರು ವಿಭಾಗದಲ್ಲಿ ಕಳಸ, ಶೃಂಗೇರಿ (ಕೆರೆಕಟ್ಟೆ ) ಮಲೆನಾಡಿನ ಹಲವು ಭಾಗಗಳಲ್ಲಿ ಸಂಚಾರ ಮಾಡುತ್ತಿದ್ದು ಕಾಡಾನೆಗಳು ಊರಿಗೆ ಬಂದು ಜನಸಾಮಾನ್ಯರು ತಿರುಗಾಡುವ ಮಧ್ಯ ರಸ್ತೆಯಲ್ಲಿ ಹಾಗೂ ರೈತರು ಬೆಳೆದಿರುವಂತಹ ಅಡಿಕೆ ತೋಟ,ಕಾಫಿ, ಭತ್ತದ ಗದ್ದೆಗಳಲ್ಲಿ ರೈತರ ಬೆಳೆಗಳನ್ನು ಹಾಳು ಮಾಡಿ ಮನುಷ್ಯರು ಕಂಡು ಬಂದಲ್ಲಿ ಅವರನ್ನು ಏಕಾಏಕಿ ದಾಳಿ ಮಾಡುವುದಲ್ಲದೆ ಕೊಂದು ಬಿಡುತ್ತಿವೆ, ಹಾಗೆಯೇ ಹಳ್ಳಿಯಿಂದ ತಿರುಗಾಡುವ ಶಾಲಾ ಮಕ್ಕಳು, ಕೆಲ ಸಕ್ಕೆಂದು ತಿರುಗಾಡುವ ಜನರಿಗೆ ಭಯವನ್ನು ಉಂಟು ಮಾಡುವುದಲ್ಲದೆ ಪಶ್ಚಿಮ ಘಟ್ಟದ ಜನರು ಭಯದಿಂದ ಓಡಾಡುವ ಪರಿಸ್ಥಿತಿ ಕೂಡ ನಿರ್ಮಾಣವಾಗಿದೆ. ಅಲ್ಲದೆ ಕೆಲವು ತಿಂಗಳಿಂದ ಮಾಧ್ಯಮಗಳಲ್ಲಿಯೂ ಕಾಡಾನೆ ಹಾವಳಿಯ ವಿಡಿಯೋಗಳು ಬರುತ್ತಲೇ ಇದ್ದು. ನೆನ್ನೆಯ ದಿನ ಎನ್ ಆರ್ ಪು...

" ಕೇರಳ ಮೂಲದ ಹುಡುಗ ಅಸ್ಸಾಂ ಮೂಲದ ಹುಡುಗಿ ಪ್ರೇಮಕಥೆ ಕೊನೆಯಲ್ಲಿ ಅಂತ್ಯ "

Image
" ಕೇರಳ ಹುಡುಗ, ಅಸ್ಸಾಂ ಹುಡುಗಿ ಪ್ರೇಮಕಥೆ ಬೆಂಗಳೂರಿನಲ್ಲಿ ದುರಂತ ಅಂತ್ಯ: ಪ್ರೇಯಸಿ ಕೊಂದು ಪ್ರೇಮಿ ಪರಾರಿ " ಬೆಂಗಳೂರು (ನ.29): ಈಗಾಗಲೇ ಕಳೆದ ಮೂರ್ನಾಲ್ಕು ದಿನಗಳ ಹಿಂದೆ ಬೆಂಗಳೂರಿನ ಅಪಾರ್ಟ್‌ಮೆಂಟ್ ಒಂದರಲ್ಲಿ ಅಸ್ಸಾಂ ಯುವತಿ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾದ ಪ್ರಕರಣಕ್ಕೆ ರೋಚಕ ತಿರುವು ಸಿಕ್ಕಿದೆ. ಅಸ್ಸಾಂ ಯುವತಿಯನ್ನು ಲವ್ ಮಾಡೋದಾಗಿ ರೂಮಿಗೆ ಕರೆಸಿಕೊಂಡು ಸಮ್ಮತಿ ಸೆಕ್ಸ್ ಮೂಲಕ ಕಾಮತೃಷೆ ತೀರಿಸಿಕೊಂಡ ಕೇರಳದ ಯುವಕ ನಂತರ ಆಕೆಯನ್ನು ಕೊಲೆ ಮಾಡಿ ಪರಾರಿ ಆಗಿದ್ದು, ಇದೀಗ ಪೊಲೀಸರ ಕೈಗೆ ಹೊರ ರಾಜ್ಯದಲ್ಲಿ ಸಿಕ್ಕಿಬಿದ್ದಿದ್ದಾನೆ.   ಬೆಂಗಳೂರಿನ ಇಂದಿರಾನಗರದ ಅಪಾರ್ಟ್‌ಮೆಂಟ್ ಒಂದರಲ್ಲಿ ಕಳೆದ ಮಂಗಳವಾರ ಅಸ್ಸಾಂ ಮೂಲದ ಯುವತಿಯ ಮೃತದೇಹ ಕೊಲೆಯಾದ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಈ ಯುವತಿ ಯಾರೆಂದು ಪತ್ತೆ ಮಾಡಿದಾಗ ಆಕೆ ಅಸ್ಸಾಂ ಮೂಲದ ಯುವತಿ ಮಾಯಾ ಗೊಗೋಯ್ ಎಂಬುದು ಗೊತ್ತಾಗಿದೆ. ಕೆಲವು ದಿನಗಳ ಹಿಂದೆ ಬೆಂಗಳೂರಿಗೆ ಕೆಲಸ ಅರಸಿ ಬಂದಿದ್ದ ಯುವತಿ, ಇಲ್ಲಿ ಕೆಲಸ ಮಾಡುತ್ತಾ ಕೇರಳದ ಯುವಕ ಆರವ್‌ ಹನೋಯ್‌ ನನ್ನು ಪ್ರೀತಿ ಮಾಡಿದ್ದಾಳೆ. ಇಬ್ಬರೂ ಕೆಲ ದಿನಗಳ ಕಾಲ ತಮ್ಮ ತಮ್ಮ ಊರಿಗೆ ಹೋಗಿದ್ದರು. ಊರಿನಿಂದ ಇಬ್ಬರೂ ವಾಪಸ್ ಬೆಂಗಳೂರಿಗೆ ಬಂದ ನಂತರ ಒಂದು ಅಪಾರ್ಟ್‌ಮೆಂಟ್‌ನಲ್ಲಿ ಬಾಡಿಗೆಗೆ ರೂಮು ಮಾಡಿದ್ದಾರೆ. ಅಲ್ಲಿ ಮೂರು ದಿನ ವಾಸ್ತವ್ಯ ಹೂಡಿದ್ದ ಇಬ್...

" ಬಿಗ್ ಬಾಸ್ ನಲ್ಲಿರುವ ಹುಡುಗಿಗೆ ಬಿಗ್ ಶಾಕ್ "

Image
" ಬಿಗ್ ಬಾಸ್ ನಲ್ಲಿರುವ ಹುಡುಗಿಗೆ ಬಿಗ್ ಶಾಕ್ "  ಚೈತ್ರ ಕುಂದಾಪುರ : ಕನ್ನಡ ಬಿಗ್ ಬಾಸ್ ಸೀಸನ್ 11           ಕನ್ನಡ ಬಿಗ್ ಬಾಸ್ ನಲ್ಲಿರುವ ಚೈತ್ರ ಕುಂದಾಪುರ ಅವರಿಗೆ ಈಗ ದೊಡ್ಡ ಸಂಕಷ್ಟ ಎದುರಾಗಿದೆ.ಹೌದು ಉದ್ಯಮಿ ಗೋವಿಂದ ಪೂಜಾರಿ ಅವರಿಗೆ ಬಿಜೆಪಿ ವಿಧಾನಸಭಾ ಕ್ಷೇತ್ರದ ಟಿಕೆಟ್ ಕೊಡಿಸುವುದಾಗಿ ವಂಚಿಸಿರುವ ಆರೋಪದ ಹಿನ್ನೆಲೆಯಲ್ಲಿ ಚೈತ್ರ ಕುಂದಾಪುರ ವಿರುದ್ಧ ಸಿಸಿಬಿ ಪೊಲೀಸರು ಈಗ ಚಾರ್ಜ್ ಶೀಟ್ ಸಲ್ಲಿಸಿದ್ದಾರೆ.  ಈ ಘಟನೆಗೆ ಸಂಬಂಧಿಸಿದಂತೆ ಕೋರ್ಟ್ ಗೆ ಹಾಜರಾಗ ಬೇಕಾಗಿದ್ದ ಚೈತ್ರ ಸದ್ಯ ಬಿಗ್ ಬಾಸ್ ಮನೆಯಲ್ಲಿ ಸ್ಪರ್ಧಿಯಾಗಿದ್ದಾರೆ.ಈ ವಿಚಾರವಾಗಿ ಚೈತ್ರ ಪರ ವಕೀಲರು ಮುಂದಿನ ದಿನಗಳಲ್ಲಿ ಚೈತ್ರ ಅವರು  ನ್ಯಾಯಾಲಯಕ್ಕೆ ವಿಚಾರಣೆಗೆ ಹಾಜರಾಗುತ್ತಾರೆ ಎಂದು ತಿಳಿಸಿದ್ದಾರೆ..........            " ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾ ಇರಿ ಕರ್ನಾಟಕ ಸಿಟಿಜನ್ ನ್ಯೂಸ್ ಪ್ರತಿಕ್ಷಣ ಕ್ಷಣವೂ ನಿಮ್ಮ ಜೊತೆ"

"ಕಳಸ ಸಮೀಪ ಕಗ್ಗನಾಳ ಬಳಿ ಕೆ ಎಸ್ ಆರ್ ಟಿ ಸಿ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ"

ಚಿಕ್ಕಮಗಳೂರು :" ಕಳಸ ಸಮೀಪ ಕಗ್ಗನಾಳ ಬಳಿ ಕೆ ಎಸ್ ಆರ್ ಟಿ ಸಿ ಹಾಗೂ ಲಾರಿ ನಡುವೆ ಮುಖಾಮುಖಿ ಡಿಕ್ಕಿ "         ಹೊರನಾಡಿನಿಂದ ಚಿಕ್ಕಮಗಳೂರಿಗೆ ಬರುತ್ತಿದ್ದ ಸರ್ಕಾರಿ ಬಸ್ ಹಾಗೂ  ಬಾಳೆಹೊನ್ನೂರು ನಿಂದ ಕಳಸ ಕಡೆಗೆ ತೆರಳುತ್ತಿದ್ದ  ಲಾರಿ ನಡುವೆ ಮುಖಾಮುಖಿ ಡಿಕ್ಕಿಯಾಗಿದ್ದು ಈ ಘಟನೆಯು  ಕಳಸ ಸಮೀಪ ಕಗ್ಗನಾಳ ಕಿರು ಸೇತುವೆ ಬಳಿ ಈ ಘಟನೆ ನಡೆದಿದೆ.         ಬಸ್ನಲ್ಲಿ ಇದ್ದವರಿಗೆ ಸಣ್ಣ ಪುಟ್ಟ ಗಾಯಗಳಾಗಿವೆ   ಒಂದು ಗಂಟೆಗೂ ಹೆಚ್ಚು ಕಾಲ ಟ್ರಾಫಿಕ್ ಜಾಮ್ ಉಂಟಾಗಿ ವಾಹನ ಸವಾರರು ಕೆಲವು ಗಂಟೆಗಳ ಕಾಲ ಪರದಾಡುವ ಪರಿಸ್ಥಿತಿ ಉಂಟಾಗಿದ್ದು ಯಾವುದೇ ಇಲ್ಲಿ ಪ್ರಾಣ ಹಾನಿ ಉಂಟಾಗಿಲ್ಲ.                        " ಕ್ಷಣ ಕ್ಷಣದ ಸುದ್ದಿಗಳಿಗಾಗಿ ನೋಡ್ತಾ ಇರಿ ಕರ್ನಾಟಕ ಸಿಟಿಜನ್ ನ್ಯೂಸ್ ಪ್ರತಿಕ್ಷಣವೂ ನಿಮ್ಮ ಜೊತೆ "