Posts

Showing posts from June, 2025

"ಶಿವಮೊಗ್ಗದಲ್ಲಿ ಅಮಾನವೀಯ ಕೃತ್ಯ: 67 ವರ್ಷದ ವೃದ್ಧೆಯನ್ನು ಮರಕ್ಕೆ ಕಟ್ಟಿ ಹಲ್ಲೆ..!"

Image
"ಶಿವಮೊಗ್ಗದಲ್ಲಿ ಅಮಾನವೀಯ ಕೃತ್ಯ: 67 ವರ್ಷದ ವೃದ್ಧೆಯನ್ನು ಮರಕ್ಕೆ ಕಟ್ಟಿ ಹಲ್ಲೆ..!" ಶಿವಮೊಗ್ಗ: ಜಿಲ್ಲೆಯ ಸಾಗರ ತಾಲೂಕಿನ ಆನಂದಪುರ ಹೋಬಳಿಯ ಗೌತಮಪುರ ಗ್ರಾಮದಲ್ಲಿ ಆಘಾತಕಾರಿ ಘಟನೆಯೊಂದು ನಡೆದಿದೆ. 67 ವರ್ಷದ ವೃದ್ಧೆ ಹುಚ್ಚಮ್ಮ ಎಂಬಾಕೆಯನ್ನು ಕೇವಲ ಮನೆಯ ಮುಂದೆ ಕಸ ಹಾಕಿದ್ದನ್ನು ಪ್ರಶ್ನಿಸಿದ ಕಾರಣಕ್ಕೆ ನಿಂದಿಸಿ, ಕಂಬಕ್ಕೆ ಕಟ್ಟಿ ದೈಹಿಕವಾಗಿ ತೀವ್ರವಾಗಿ ಹಲ್ಲೆ ಮಾಡಿರುವ ಘಟನೆ ಬೆಳಕಿಗೆ ಬಂದಿದೆ. ಈ ಕೃತ್ಯವನ್ನು ಗ್ರಾಮದ ಪ್ರೇಮ, ಮಂಜುನಾಥ್ ಮತ್ತು ದರ್ಶನ್ ಎಂಬ ಮೂವರು ಎಸಗಿದ್ದಾರೆ ಎಂದು ತಿಳಿದುಬಂದಿದೆ. ಗೌತಮಪುರ ಗ್ರಾಮದ ಹುಚ್ಚಮ್ಮ ಅವರು ತಮ್ಮ ಮನೆಯ ಮುಂದೆ ಪ್ರೇಮ ಎಂಬ ಮಹಿಳೆ ಕಸ ತಂದು ಹಾಕಿದ್ದನ್ನು ಪ್ರಶ್ನಿಸಿದ್ದರು. ಈ ಸಣ್ಣ ವಿಷಯಕ್ಕೆ ಕೋಪಗೊಂಡ ಪ್ರೇಮ, ಜೊತೆಗೆ ಮಂಜುನಾಥ್ ಮತ್ತು ದರ್ಶನ್ ಎಂಬ ಇಬ್ಬರು ಯುವಕರು, ಹುಚ್ಚಮ್ಮ ಅವರನ್ನು ನಿಂದಿಸಿ, ಮನೆಯಿಂದ ಎಳೆದುಕೊಂಡು ಹೋಗಿ ಹಗ್ಗದಿಂದ ಕಂಬಕ್ಕೆ ಕಟ್ಟಿ ತೀವ್ರವಾಗಿ ಹಲ್ಲೆ ಮಾಡಿದ್ದಾರೆ. ಈ ಘಟನೆಯ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕರಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ. ಹುಚ್ಚಮ್ಮ ಅವರು ಆನಂದಪುರ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಅವರ ಪುತ್ರ ಕನ್ನಪ್ಪ, ತಾಯಿಗೆ ರಕ್ಷಣೆ ನೀಡುವಂತೆ ಪೊಲೀಸರಿಗೆ ಮನವಿ ಮಾಡಿದ್ದಾರೆ. ಆನಂದಪುರ ಪೊಲೀಸರು ಈ ಕುರಿತು ಪ್ರಕರಣ ದಾಖಲಿಸಿಕೊಂಡು ತನಿಖೆ ಆರಂಭ...

" ಕೊಪ್ಪ ಮುರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಮತ್ತೊಂದು ವಿದ್ಯಾರ್ಥಿನಿ ಆತ್ಮಹತ್ಯೆ "

Image
" ಕೊಪ್ಪ ಮುರಾರ್ಜಿದೇಸಾಯಿ ವಸತಿ ಶಾಲೆಯಲ್ಲಿ ಮತ್ತೊಂದು ವಿದ್ಯಾರ್ಥಿನಿ ಆತ್ಮಹತ್ಯೆ " ಕೊಪ್ಪ : ಕೊಪ್ಪತಾಲ್ಲೂಕಿನ ಪಟ್ಟಣದ ಒಳಭಾಗದಲ್ಲಿರುವ ಮುರಾರ್ಜಿದೇಸಾಯಿ ಹಾಸ್ಟೆಲ್ನಲ್ಲಿ ಪದೇ ಪದೇ ಆತ್ಮಹತ್ಯೆ ಇದೀಗ ಹಲವು ಅನುಮಾನಕ್ಕೆ ಕಾರಣವಾಗಿದ್ದು, ಮಕ್ಕಳಿಗೆ ಯಾವುದೇ ರೀತಿಯ ರಕ್ಷಣೆ ಇಲ್ಲ ಎಂಬಸುದ್ಧಿ ಸಾರ್ವಜನಿಕವಾಗಿ ಕೇಳಿಬರುತ್ತಿದ್ದೂ ಅಕ್ಷರ ಶಹಅದು ನೂರಕ್ಕೂ ನೂರು ಸತ್ಯವಾಗಿದೆ.  ಅಲ್ಲದೇ ಪಟ್ಟಣದ ಯಾವುದೋ ಒಂದು ಮೂಲೆಯಲ್ಲಿ ಕೊಂಪೆಯಂತಿರುವ ಹಾಸ್ಟೆಲ್ ಅಲ್ಲಿ ಸಿಸಿಟಿವಿ ಸೇರಿ ಯಾವುದೇ ಸೌಲಭ್ಯ ಇಲ್ಲ ಎಂಬ ಆರೋಪ ಕೇಳಿ ಬಂದಿದೆ.     ಶನಿವಾರ ರಾತ್ರಿ ನೇಣು ಬಿಗಿದುಕೊಂಡು 9ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಇದೀಗ ಭಾರೀ ಅನುಮಾನಕ್ಕೆ ಕಾರಣ ಆಗಿದೆ.  ಕೊಪ್ಪ ತಾಲೂಕಿನ ಬೊಮ್ಮಲಾಪುರದ ಹೊಕ್ಕಳಿಕೆ ಮೂಲದ ವಿದ್ಯಾರ್ಥಿನಿ ಶಮಿತ( 14) ಮೃತ ವಿದ್ಯಾರ್ಥಿನಿ ಎಂದು ತಿಳಿದು ಬಂದಿದ್ದು ಶಿವಮೊಗ್ಗ ಸರ್ಕಾರಿ ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ ನಡೆಸ ಲಾಗಿದೆ. ಕೊಪ್ಪದ ಮೊರಾರ್ಜಿ ಶಾಲೆಯಲ್ಲಿ 9ನೇ ತರಗತಿ ಓದುತ್ತಿರುವ ವಿದ್ಯಾರ್ಥಿನಿ ಚೂಡಿದಾರ್ನ ವೇಲ್ ನಿಂದ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಕೊಪ್ಪ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ತನಿಖೆ ನಡೆಸಿದ್ದಾರೆ. ಅದರೆ ಕಾರಣ ಇನ್ನು ರಹಸ್ಯವಾಗಿದೆ.           ...

"ಜಿಲ್ಲೆಯಲ್ಲಿ ಮುಂದುವರಿದ ಗಾಳಿ ಮಳೆ ಶಾಲೆ ಗಳಿಗೆ ರಜೆ 2ನೇ ದಿನಕ್ಕೆ ಮುಂದೂಡಿಕೆ : ಜಿಲ್ಲಾಧಿಕಾರಿ ಮೀನಾ ನಾಗರಾಜ್ "

Image
 ಜಿಲ್ಲೆಯಲ್ಲಿ ಮುಂದುವರಿದ ಗಾಳಿ ಮಳೆ ಶಾಲೆ ಗಳಿಗೆ ರಜೆ 2ನೇ ದಿನಕ್ಕೆ ಮುಂದೂಡಿಕೆ : ಜಿಲ್ಲಾಧಿಕಾರಿ ಮೀನಾ ನಾಗರಾಜ್ "   ಚಿಕ್ಕಮಗಳೂರು: ಜಿಲ್ಲೆಯ ಹಲವು ಭಾಗಗಳಲ್ಲಿ ಧಾರಾಕಾರವಾಗಿ ಸುರಿಯುತ್ತಿದ್ದ ಹಿನ್ನಲೆಯಲ್ಲಿ ಜಿಲ್ಲಾಡಳಿತವು ಗುರುವಾರ ಒಂದು ದಿನ ರಜೆಯನ್ನು ನೀಡಲಾಗಿತ್ತು ಆದರೆ  ಮುಂದುವರಿದ  ಗಾಳಿ-ಮಳೆ ಯಿಂದಾಗಿ ಆಗುವ ಅನಾಹುತಗಳನ್ನು ತಡೆಯುವ ಮುನ್ನೆಚ್ಚರಿಕೆ ಸಲುವಾಗಿ ದಿನಾಂಕ /26/06/2025 ರ ಗುರುವಾರ ಹಾಗೂ  27/06/2025 ಶುಕ್ರವಾರರಂದು ಒಂದು ದಿನ ಹೆಚ್ಚುವರಿಯಾಗಿ ಒಟ್ಟು  2ನೇ ದಿನಕ್ಕೆ ಮುಂದುವರೆದಿದೆ.             ಈ ರಜೆಯು  ಕೊಪ್ಪ,ಶೃಂಗೇರಿ, ಎನ್ ಆರ್ ಪುರ, ಮೂಡಿಗೆರೆ, ಹಾಗೂ ಕಳಸ ತಾಲೂಕುಗಳಿಗೆ ಅಂಗನವಾಡಿ, ಪ್ರಾಥಮಿಕ ಹಾಗೂ ಪ್ರೌಢಶಾಲೆಗಳಿಗೆ ಮಾಯವಾಗಿದ್ದು.              ಜಿಲ್ಲಾಧಿಕಾರಿ ಮೀನಾ ನಾಗರಾಜ್ ರವರಿಂದ ರಜೆಯನ್ನ  ಘೋಷಿಸಲಾಗಿದೆ.

" ಶೃಂಗೇರಿಯ ಹಾಗಲಗಂಚಿಯಲ್ಲಿ ದೇವನಹಳ್ಳಿ ಪ್ರತಿಭಟನಾ ರೈತರ ಬಂಧನ ಖಂಡಿಸಿ ಪ್ರತಿಭಟನೆ "

Image
" ಶೃಂಗೇರಿಯ ಹಾಗಲಗಂಚಿಯಲ್ಲಿ ದೇವನಹಳ್ಳಿ ಪ್ರತಿಭಟನಾ ರೈತರ ಬಂಧನ ಖಂಡಿಸಿ ಪ್ರತಿಭಟನೆ "  ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ  ಮೆಣಸೆ ಗ್ರಾಮದ ಹಾಗಲಗಂಚಿಯಲ್ಲಿ  ಮೊನ್ನೆ ನಡೆದ  ಬೆಂಗಳೂರಿನ ದೇವನಹಳ್ಳಿ ಯಲ್ಲಿ ರೈತರು ತಮ್ಮ ಭೂಮಿಯನ್ನು ಉಳಿಸಿಕೊಳ್ಳಲು ಪ್ರತಿಭಟಿಸುತ್ತಿದ್ದ ವೇಳೆ ಸರ್ಕಾರ ಬಂದಿಸಿರುವುದನ್ನು ಖಂಡಿಸಿ, ರೈತಹೋರಾಟವನ್ನು ಬೆಂಬಲಿಸಿ ಶೃಂಗೇರಿ ತಾಲೂಕಿನ ಹಾಗಲಗಂಚಿಯಲ್ಲಿ " ಪ್ರಗತಿ ರೈತ ಬಳಗ "ದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು. ಈ ಪ್ರತಿಭಟನೆಯಲ್ಲಿ    ವೆಂಕಟೇಶ ಹಾಗಲಗಂಚಿ ಯವರು ದೇವನಹಳ್ಳಿ ರೈತರ ಹೋರಟದ ಹಿನ್ನೆಲೆಯನ್ನು ವಿವರಿಸಿ ಮಾತನಾಡಿದರು,  ಗುರುಮೂರ್ತಿ ಜೋಗಿಬೈಲ್ ಅವರು  'ಇಂತಹ ಹೋರಾಟಗಳನ್ನು ನಾಡಿನ ಎಲ್ಲ ರೈತರೂ ಬೆಂಬಲಿಸಿ ಜೊತೆಗೆ ನಿಲ್ಲಬೇಕಾದ ಅಗತ್ಯದ ಕುರಿತು ವಿವರಿಸಿದರು, ಸಣ್ಣ ಹಳ್ಳಿಯಾದರೂ ಐವತ್ತಕ್ಕೂ ಹೆಚ್ಚು ರೈತರು,ಹಾಗೂ ಕೃಷಿ ಕಾರ್ಮಿಕರು ಭಾಗವಹಿಸಿದ್ದರು.