Posts

Showing posts from September, 2025

ದಳಪತಿ ವಿಜಯ್ ಏನೂ ಅಲ್ಲ, ಅವರ ಪತ್ನಿಯ ಆಸ್ತಿ ಮೌಲ್ಯ ಕೇಳಿದ್ರೆ ತಲೆ ತಿರುಗುತ್ತೆ! ಎಷ್ಟಿದೆ ಗೊತ್ತೆ..?

Image
ದಳಪತಿ ವಿಜಯ್ ಏನೂ ಅಲ್ಲ, ಅವರ ಪತ್ನಿಯ ಆಸ್ತಿ ಮೌಲ್ಯ ಕೇಳಿದ್ರೆ ತಲೆ ತಿರುಗುತ್ತೆ! ಎಷ್ಟಿದೆ ಗೊತ್ತೆ..? ತ.ನಾಡು :ವಿಜಯ್ ತಮ್ಮ ಐಷಾರಾಮಿ ಜೀವನಶೈಲಿ ಮತ್ತು ಯಶಸ್ವಿ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಆದರೆ ಅವರ ಪತ್ನಿ ಅಷ್ಟೇ ಶ್ರೀಮಂತರು ಎಂದು ಕೆಲವೇ ಜನರಿಗೆ ತಿಳಿದಿದೆ. ಅವರ ನಿವ್ವಳ ಮೌಲ್ಯವು ವಿಜಯ್ ಅವರ ಆಸ್ತಿಗಿಂತ ಅತೀ ಹೆಚ್ಚಾಗಿದೆ. ಏಕೆಂದರೆ ಅವರ ಪತ್ನಿ ಸಂಗೀತಾ ಸೊರ್ನಲಿಂಗಂ ಒಬ್ಬ ಯಶಸ್ವಿ ಕೈಗಾರಿಕೋದ್ಯಮಿಯ ಮಗಳು. ಸಂಗೀತಾ ಶ್ರೀಲಂಕಾದ ತಮಿಳು ಕುಟುಂಬದಲ್ಲಿ ಜನಿಸಿದರು. ಅವರು ಬಾಲ್ಯದಲ್ಲಿಯೇ ತಮ್ಮ ಹೆತ್ತವರೊಂದಿಗೆ ಲಂಡನ್‌ಗೆ ತೆರಳಿದರು. ಮತ್ತೊಂದು ವರದಿಯ ಪ್ರಕಾರ, ದಳಪತಿ ವಿಜಯ್ ಅವರ ಪತ್ನಿ ಸಂಗೀತಾ ಅವರ ನಿವ್ವಳ ಮೌಲ್ಯ ಸುಮಾರು 4 ಬಿಲಿಯನ್ ರೂ. (US$4 ಬಿಲಿಯನ್) ಎನ್ನಲಾಗಿದೆ. ಸಂಗೀತಾ ಬ್ರಿಟನ್‌ನಲ್ಲಿ ನೆಲೆಸಿರುವ ಪ್ರಮುಖ ತಮಿಳು ಕೈಗಾರಿಕೋದ್ಯಮಿಯ ಮಗಳು. ಮತ್ತೊಂದೆಡೆ, ವಿಜಯ್ ಅವರ ನಿವ್ವಳ ಮೌಲ್ಯ ಸುಮಾರು 6 ಬಿಲಿಯನ್ ರೂ. (US$6 ಬಿಲಿಯನ್). ಸಂಗೀತಾ ಸೊರ್ನಲಿಂಗಂ ಅವರ ಸರಳತೆ ಮತ್ತು ದಳಪತಿ ವಿಜಯ್ ಅವರ ಕಷ್ಟದ ಸಮಯದಲ್ಲಿ ಅವರ ಬೆಂಬಲಕ್ಕೆ ನಿಂತಿದ್ದಕ್ಕಾಗಿ ವ್ಯಾಪಕವಾಗಿ ಪ್ರಶಂಸಿಸಲ್ಪಟ್ಟಿದ್ದಾರೆ. ಸಂಗೀತಾ ಮಾಧ್ಯಮದಿಂದ ದೂರವಿರಲು ಬಯಸುತ್ತಾರೆ. ಅವರ ಶಕ್ತಿ ಮತ್ತು ನಿಷ್ಠೆಯು ಅವರಿಗೆ ವ್ಯಾಪಕ ಗೌರವವನ್ನು ಗಳಿಸಿದೆ. ಅವರ ಶಿಕ್ಷಣದ ಬಗ್ಗೆ ಹೆಚ್ಚು ತಿಳಿದಿಲ್ಲ. ಕೆಲವರು ಅವರನ್ನು ಗೃಹಿ...

ಪ್ರಜ್ವಲ್‌ ರೇವಣ್ಣ ಜೀವಾವಧಿ ಶಿಕ್ಷೆ ರದ್ದು..? ಹೈಕೋರ್ಟ್‌ಗೆ ಕೇಳಿಕೊಂಡಿದ್ದಾದ್ರೂ ಏನು..?

Image
ಪ್ರಜ್ವಲ್‌ ರೇವಣ್ಣ ಜೀವಾವಧಿ ಶಿಕ್ಷೆ ರದ್ದು..? ಹೈಕೋರ್ಟ್‌ಗೆ ಕೇಳಿಕೊಂಡಿದ್ದಾದ್ರೂ ಏನು..? ಮಹಿಳೆ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿರುವ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಹೈಕೋರ್ಟ್‌ ಮೆಟ್ಟಿಲೇರಿದ್ದಾರೆ. ಹೊಳೆನರಸೀಪುರದ ಮನೆಯೊಂದರಲ್ಲಿ ಕೆಲಸ ಮಾಡುತ್ತಿದ್ದ ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಪ್ರಕರಣದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿರುವ ವಿಚಾರಣಾ ನ್ಯಾಯಾಲಯದ ತೀರ್ಪನ್ನು ರದ್ದು ಮಾಡುವಂತೆ ಪ್ರಜ್ವಲ್‌ ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದಾರೆ. ಮಹಿಳೆಯರ ಮೇಲಿನ ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್‌ ರೇವಣ್ಣ ಅರೆಸ್ಟ್‌ ಆಗಿದ್ದರಿಂದ ಜೆಡಿಎಸ್‌ ಪಕ್ಷದಿಂದ ಅವರನ್ನು ಉಚ್ಚಾಟನೆ ಮಾಡಲಾಗಿದೆ. ಕಳೆದ ಲೋಕಸಭಾ ಚುನಾವಣೆ ವೇಳೆ ಪ್ರಜ್ವಲ್‌ ರಾಸಲೀಲೆ ವಿಡಿಯೋಗಳಿದ್ದ ಪೆನ್‌ಡ್ರೈವ್‌ಗಳು ಹಾಸನದಾದ್ಯಂತ ಸಂಚಲನ ಸೃಷ್ಟಿಸಿದ್ದವು. ಇದರಲ್ಲಿ ಪ್ರಜ್ವಲ್‌ ಹಲವು ಮಹಿಳೆಯರ ಮೇಲೆ ಅತ್ಯಾಚಾರ ಎಸಗಿದ್ದ ವಿಡಿಯೋಗಳಿದ್ದವು. ಬಳಿಕ ಅವರನ್ನು ಎಸ್‌ಐಟಿ ಅಧಿಕಾರಿಗಳು ಬಂಧಿಸಿ, ತನಿಖೆ ನಡೆಸಿದ್ದರು. ವಿಚಾರಣಾ ನ್ಯಾಯಾಲಯವು ಪ್ರಜ್ವಲ್‌ ಮೇಲೆ ದಾಖಲಾಗಿದ್ದ ಒಂದು ಕೇಸ್‌ನಲ್ಲಿ ಜೀವಾವಧಿ ಶಿಕ್ಷೆ ಪ್ರಕಟಿಸಿತ್ತು. ಮನೆಕೆಲಸ ಮಾಡುವ ಮಹಿಳೆ ಮೇಲೆ ಅತ್ಯಾಚಾರ ಕೇಸ್‌ನಲ್ಲಿ ಪ್ರಜ್ವಲ್‌ ದೋಷಿ ಎಂದು ತೀರ್ಪು ನೀಡಿತ್ತು. ಹಾಗಾಗಿ ಜೀವಾವಧಿ ಶಿಕ್ಷೆಯಲ್ಲಿರುವ ಪ್ರಜ್ವಲ್‌ ರೇವಣ್ಣ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದಾರೆ. ಈಗ...

ಸಾರ್ವಜನಿಕರಿಗೆ ಅಕ್ಟೋಬರ್ 1ರಿಂದ ಕೆಲವು ನಿಯಮಗಳಲ್ಲಿ ಬದಲಾವಣೆ..!

Image
ಸಾರ್ವಜನಿಕರಿಗೆ ಅಕ್ಟೋಬರ್ 1ರಿಂದ ಕೆಲವು ನಿಯಮಗಳಲ್ಲಿ ಬದಲಾವಣೆ..!  ಅಕ್ಟೋಬರ್ 1ರಿಂದ ದೇಶದಲ್ಲಿ ಕೆಲವು ಮಹತ್ತರವಾದ ಬದಲಾವಣೆಗಳು ಜಾರಿಯಾಗಲಿವೆ. 1) ಎಲ್ ಪಿ ಜಿ ಸಿಲಿಂಡರ್ಗಳ ಬೆಲೆಗಳಲ್ಲಿ ಬದಲಾವಣೆ ನಿರೀಕ್ಷೆ. 2) ರೈಲ್ವೆ ಟಿಕೆಟ್ಬು ಬುಕಿಂಗ್ ನಿಯಮಗಳಲ್ಲಿ ಕಠಿಣ. ಮೊದಲ 15 ನಿಮಿಷಗಳು ಆಧಾರ್ ಲಿಂಕ್ ಆದವರಿಗೆ ಮಾತ್ರ ಲಭ್ಯ. 3) ಆನ್ಲೈನ್ ಗೇಮಿಂಗ್ ಕಟ್ಟುನಿಟ್ಟಿನ ನಿಯಮಗಳು ಜಾರಿ. 4) ರಾಷ್ಟ್ರೀಯ ಪಿಂಚಣಿ ವ್ಯವಸ್ಥೆಯಲ್ಲಿ ಒಂದೇ ಪ್ಯಾನ್ ನೊಂದಿಗೆ ಬಹು ಯೋಜನೆಗಳಲ್ಲಿ ಹೂಡಿಕೆ ಮಾಡಲು ಅವಕಾಶ. 5) ಯುಪಿಐ ಹಣ ಮೂಲಕ ವಿನಂತಿಸುವ " ಕಲೆಕ್ಟ್ ರಿಕ್ವೆಸ್ಟ್ " ವೈಶಿಷ್ಟವನ್ನು ಆನ್ಲೈನ್ ವಂಚನೆಯನ್ನು ತಡೆಯಲು ಸ್ಥಗಿತಗೊಳಿಸಲಾಗುವುದು.

ಸಾಗರದ ಕೊರನ ಕೊಪ್ಪ ಸಮೀಪ ಭೀಕರ ಅಪಘಾತ: ಟಿಟಿ ಪಲ್ಟಿಯಾಗಿ ಹಲವರಿಗೆ ಗಾಯ – ತಕ್ಷಣ ಆಸ್ಪತ್ರೆಗೆ ಶಾಸಕ ಬೇಳೂರು ದೌಡು

Image
ಕೂರನಕೊಪ್ಪ ಸಮೀಪ ಟಿಟಿ ವಾಹನ ಪಲ್ಟಿ – ತಕ್ಷಣ ಆಸ್ಪತ್ರೆಗೆ ದೌಡಾಯಿಸಿದ ಶಾಸಕ ಬೇಳೂರು ಸಾಗರ : ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ಸಿಗಂದೂರು ಸಮೀಪ ಕೂರನಕೊಪ್ಪ ವ್ಯಾಪ್ತಿಯಲ್ಲಿ ಭಾನುವಾರ ಟಿಟಿ ವಾಹನ ಪಲ್ಟಿಯಾಗಿ 12 ಮಹಿಳೆಯರು ಹಾಗೂ ಓರ್ವ ಚಾಲಕ ಗಾಯಗೊಂಡಿರುವ ಘಟನೆ ನಡೆದಿದೆ. ಬೆಂಗಳೂರಿನಿಂದ ಟ್ರೈನ್ ಮೂಲಕ ಸಾಗರಕ್ಕೆ ಆಗಮಿಸಿದ 12 ಮಹಿಳೆಯರ ತಂಡ ಸಾಗರ ದಿಂದ ಟಿಟಿ ವಾಹನ ಮಾಡಿಕೊಂಡು ಸಿಗಂದೂರು ಚೌಡೇಶ್ವರಿ ದರ್ಶನಕ್ಕೆ ಹೋಗುತ್ತಿರುವ ಸಂದರ್ಭದಲ್ಲಿ ಸಿಗಂದೂರು ರಸ್ತೆಯ ಕೂರನಕೊಪ್ಪ ಸಮೀಪದಲ್ಲಿ ಚೀಟಿ ವಾಹನಪಲ್ಟಿಯಾಗಿದ್ದು 12 ಮಹಿಳೆಯರಲ್ಲಿ ಮೂರು ಮಹಿಳೆಯರಿಗೆ ಗಂಭೀರ ಗಾಯವಾಗಿದ್ದು ಸಾಗರ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ನೀಡಿದ ನಂತರ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಜಿಲ್ಲೆಯ ಖಾಸಗಿ ಆಸ್ಪತ್ರೆಗೆ ಕಳುಹಿಸಿಕೊಡಲಾಗಿದೆ. ಘಟನೆಯ ಮಾಹಿತಿ ಸಿಕ್ಕಿದ ತಕ್ಷಣ ತಮ್ಮ ಕಾರ್ಯಕ್ರಮವನ್ನು ಮುಟ್ಟುಕುಗೊಳಿಸಿ ಆಸ್ಪತ್ರೆಗೆ ದಡಾಯಿಸಿದ ಕ್ಷೇತ್ರದ ಶಾಸಕ ಗೋಪಾಲಕೃಷ್ಣ ಬೇಲೂರು ಗಾಯಲುಗಳನ್ನು ಧೈರ್ಯ ತುಂಬುವ ಜೊತೆಗೆ ವೈದ್ಯರನ್ನು ಚಿಕಿತ್ಸೆ ನೀಡಲು ಸೂಚಿಸಿದರು. ಸಾಗರ ಗ್ರಾಮಾಂತರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದ ಅಪಘಾತವಾಗಿದ್ದು ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.

ಕರೂರ್ ಕಾಲ್ತುಳಿತ' ದುರಂತದ ಹಿಂದೆ ಪಿತೂರಿ ಇದೆ : ಮದ್ರಾಸ್ ಹೈಕೋರ್ಟ್ ಮೊರೆ ಹೋದ ಟಿವಿಕೆ ಪಕ್ಷ

Image
ಕರೂರ್ ಕಾಲ್ತುಳಿತ' ದುರಂತದ ಹಿಂದೆ ಪಿತೂರಿ ಇದೆ : ಮದ್ರಾಸ್ ಹೈಕೋರ್ಟ್ ಮೊರೆ ಹೋದ ಟಿವಿಕೆ ಪಕ್ಷ ಚೆನ್ನೈ : ತಮಿಳುನಾಡಿನ ಕರೂರಿನ ಕಾಲ್ತುಳಿತ ದುರಂತಕ್ಕೆ ಸಂಬಂಧಿಸಿದಂತೆ ರ್ಯಾಲಿಯಲ್ಲಿ ಕಲ್ಲು ತೂರಾಟ, ಪೊಲೀಸ್ ಲಾಠಿ ಚಾರ್ಜ್ ನಡೆದಿದೆ ಎಂದು ಆರೋಪಿಸಿ ವಿಜಯ್ ಅವರ ಟಿವಿಕೆ ನ್ಯಾಯಾಲಯಕ್ಕೆ ಮೊರೆ ಹೋಗಿದೆ. ರ್ಯಾಲಿಯಲ್ಲಿ ಕಲ್ಲು ತೂರಾಟ, ಪೊಲೀಸ್ ಲಾಠಿ ಚಾರ್ಜ್ ಮಾಡಲಾಗಿದ್ದು, ಕಾಲ್ತುಳಿತದ ಹಿಂದೆ ಪಿತೂರಿ ನಡೆಸಲಾಗಿದೆ ಎಂದು ಆರೋಪಿಸಿ ವಿಜಯ್ ಅವರ ಟಿವಿಕೆ ಪಕ್ಷ ಮದ್ರಾಸ್ ಹೈಕೋರ್ಟ್ ಮೊರೆ ಹೋಗಿದೆ. ಈ ದುರಂತವು ಕೇವಲ ಅಪಘಾತವಲ್ಲ, ಬದಲಾಗಿ "ಪಿತೂರಿಯ" ಪರಿಣಾಮ ಎಂದು ಪಕ್ಷ ಆರೋಪಿಸಿದೆ. ಪೊಲೀಸರು ಲಾಠಿ ಚಾರ್ಜ್ ನಡೆಸಿದರು, ಸಭೆಯ ಮೇಲೆ ಕಲ್ಲುಗಳನ್ನು ಎಸೆಯಲಾಯಿತು ಮತ್ತು ಪರಿಸ್ಥಿತಿಯನ್ನು ಉದ್ದೇಶಪೂರ್ವಕವಾಗಿ ಕೆರಳಿಸಲಾಗಿದೆ ಎಂಬ ಆರೋಪಗಳನ್ನು ಟಿವಿಕೆ ತನ್ನ ಅರ್ಜಿಯಲ್ಲಿ ಎತ್ತಿ ತೋರಿಸುವ ನಿರೀಕ್ಷೆಯಿದೆ.

13 ವರ್ಷದ ಬಾಲಕ ವಿಮಾನದ ಚಕ್ರದಲ್ಲಿ ಅಡಗಿ ಕುಳಿತು ಭಾರತ ತಲುಪಿದ,

Image
13 ವರ್ಷದ ಬಾಲಕ ವಿಮಾನದ ಚಕ್ರದಲ್ಲಿ ಅಡಗಿ ಕುಳಿತು ಭಾರತ ತಲುಪಿದ, ದೆಹಲಿ :ಅಫ್ಘಾನಿಸ್ತಾನದಿಂದ ಭಾರತಕ್ಕೆ ವಿಮಾನದ ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು ಬಂದ 13 ವರ್ಷದ ಬಾಲಕನೊಬ್ಬನ ಘಟನೆ ದೆಹಲಿಯ ಇಂದಿರಾಗಾಂಧಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಕಾಬೂಲ್ ವಿಮಾನ ನಿಲ್ದಾಣದಲ್ಲಿ ವಿಮಾನದ ಒಳಗೆ ಪ್ರವೇಶಿಸಿ, ಲ್ಯಾಂಡಿಂಗ್ ಗೇರ್‌ನಲ್ಲಿ ಅಡಗಿಕೊಂಡು ಪ್ರಯಾಣಿಸಿದ ಈ ಬಾಲಕ, ಕುತೂಹಲದಿಂದ ಈ ಕೃತ್ಯ ಎಸಗಿದ್ದಾಗಿ ತಿಳಿಸಿದ್ದಾನೆ.  ಈ ಅಪಾಯಕಾರಿ ಪ್ರಯಾಣದಲ್ಲಿ ಬಾಲಕ ಹೇಗೆ ಬದುಕಿದ ಎನ್ನುವುದು ಪವಾಡವಾಗಿದೆ, ಏಕೆಂದರೆ ಅಷ್ಟು ಎತ್ತರದಲ್ಲಿ ತಾಪಮಾನ ಮತ್ತು ಆಮ್ಲಜನಕದ ಕೊರತೆಯಿಂದ ಸಾವನ್ನಪ್ಪುವ ಸಾಧ್ಯತೆಗಳು ತುಂಬಾ ಹೆಚ್ಚಿರುತ್ತವೆ. ಘಟನೆಯ ನಂತರ, ಬಾಲಕನನ್ನು ತಕ್ಷಣವೇ ಕಾಬೂಲ್‌ಗೆ ವಾಪಸ್ ಕಳುಹಿಸಲಾಗಿದೆ.   ಘಟನೆಯ ವಿವರಗಳು:  ಬಾಲಕನ ಪ್ರಯಾಣ: ಅಫ್ಘಾನಿಸ್ತಾನದ ಕುಂದುಜ್‌ನ ಈ ಹುಡುಗ, ಕಾಬೂಲ್ ವಿಮಾನ ನಿಲ್ದಾಣದಿಂದ ವಿಮಾನದ ಲ್ಯಾಂಡಿಂಗ್ ಗೇರ್ ವಿಭಾಗದಲ್ಲಿ ಅಡಗಿಕೊಂಡು ದೆಹಲಿಗೆ ಬಂದಿದ್ದಾನೆ. ವಿಮಾನಯಾನ ಸಿಬ್ಬಂದಿ ಸ್ಪಂದನೆ: ವಿಮಾನ ನಿಲ್ದಾಣದ ಸಿಬ್ಬಂದಿ ಬಾಲಕನನ್ನು ಗಮನಿಸಿ, ತಕ್ಷಣವೇ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ.          ಬಾಲಕನ ಹೇಳಿಕೆ: ಬಾಲಕನ ಪ್ರಕಾರ, ಅವನು ಕೇವಲ ಕುತೂಹಲದಿಂದ ವಿಮಾನದ ಲ್ಯಾಂಡಿಂಗ್ ಗೇರ್‌ನಲ...

ಕರ್ನಾಟಕದಲ್ಲಿ 'ಜಾತಿ ಗಣತಿ'ಗೆ ಹೈಕೋರ್ಟ್‌ನಿಂದ 'ಗ್ರೀನ್‌ ಸಿಗ್ನಲ್‌'..! ರಾಜ್ಯ ಸರ್ಕಾರಕ್ಕೆ ಬಿಗ್‌ ರಿಲೀಫ್‌..!

Image
ಕರ್ನಾಟಕದಲ್ಲಿ 'ಜಾತಿ ಗಣತಿ'ಗೆ ಹೈಕೋರ್ಟ್‌ನಿಂದ 'ಗ್ರೀನ್‌ ಸಿಗ್ನಲ್‌'..! ರಾಜ್ಯ ಸರ್ಕಾರಕ್ಕೆ ಬಿಗ್‌ ರಿಲೀಫ್‌..! ಬೆಂಗಳೂರು : ಕರ್ನಾಟಕ ಸರ್ಕಾರ ನಡೆಸುತ್ತಿರುವ ಜಾತಿ ಗಣತಿಗೆ ಮಧ್ಯಂತರ ತಡೆ ನೀಡಲು ಕರ್ನಾಟಕ ಹೈಕೋರ್ಟ್ ನಿರಾಕರಿಸಿದೆ. ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಜೋಶಿ ಅವರಿದ್ದ ವಿಭಾಗೀಯ ಪೀಠವು ಈ ತೀರ್ಮಾನ ಕೈಗೊಂಡಿದೆ. ಜಾತಿ ಗಣತಿಯನ್ನು ಪ್ರಶ್ನೆ ಮಾಡಿ ಅಖಿಲ ಕರ್ನಾಟಕ ಬ್ರಾಹ್ಮಣ ಮಹಾಸಭಾ , ರಾಜ್ಯ ಒಕ್ಕಲಿಗರ ಸಂಘ ಸಲ್ಲಿಸಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಯನ್ನು ವಿಚಾರಣೆ ನಡೆಸಿದೆ. ಇನ್ನೂ ಇದೇ ವೇಳೆ ನ್ಯಾಯಪೀಠ ಯಾವುದೇ ಕಾರಣಕ್ಕೂ ನೀವು ಸಾರ್ವಜನಿಕರಿಗೆ ಒತ್ತಡ ಹಾಕುವ ಹಾಗೇ ಇಲ್ಲ, ಈ ಬಗ್ಗೆ ಜನತೆಯಲ್ಲಿ ಜಾಗೃತಿ ಮೂಡಿಸಬೇಕು. ದತ್ತಾಂಶ ಸರ್ಕಾರ ಹೊರತು ಪಡಿಸಿ ಬೇರೆ ಯಾರಿಗೂ ಕೂಡ ಲಭ್ಯವಾಗಬಾರದು. ಗುರುವಾರ ತಡೆಯಾಜ್ಞೆ ನೀಡಲು ನಿರಾಕರಿಸಿದ ಕೋರ್ಟ್‌, ಲಿಖಿತ ವಾದಾಂಶ ಸಲ್ಲಿಕೆಗೆ ಸೂಚಿಸಿ ವಿಚಾರಣೆಯನ್ನು ಇಂದು ಮುಂದೂಡಿತು. ಆಯೋಗದ ಪರವಾಗಿ ಪ್ರೊ. ರವಿವರ್ಮಕುಮಾರ್ ಅವರು ವಾದ ಆರಂಭಿಸಿದರು. 5 ನಿಮಿಷವಾದ ಮಂಡಿಸಲು ಅವಕಾಶ ನೀಡುವಂತೆ ಕೋರ್ಟಿಗೆ ಮನವಿ ಮಾಡಿದರು. ಚಿನ್ನಪ್ಪ ರೆಡ್ಡಿ ಆಯೋಗದ ವರದಿ ಆಧರಿಸಿ ವಾದ ಮಂಡನೆ ಮಾಡಿದರು. ಶೀಘ್ರವಾದ ಮಂಡನೆ ಪೂರ್ಣಗೊಳಿಸಲು ಇದೆ ವೇಳೆ ಕೋರ್ಟ್ ಸೂಚನೆ ನೀಡಿತು. ಒಂದು ಪತ್ರ ಬಂದಿದೆ ಅದನ್ನು ನಿಮಗೆ ನೀಡುತ್ತೇ...

"ತೀರ್ಥಹಳ್ಳಿಯಲ್ಲಿ ಮುಂದುವರೆದ ಕಾಡಾನೆಗಳ ಹಾವಳಿ"

Image
"ತೀರ್ಥಹಳ್ಳಿಯಲ್ಲಿ ಮುಂದುವರೆದ ಕಾಡಾನೆಗಳ ಹಾವಳಿ"  ಎಲ್ಲೆಲ್ಲಿ ಸಂಚರಿಸಿದವು? ನಿತಿನ್‌ ಕೈದೊಟ್ಲು ತೀರ್ಥಹಳ್ಳಿ : ಕುಡುಮಲ್ಲಿಗೆ ಸಮೀಪದ ಕುನ್ನಳ್ಳಿ ಗ್ರಾಮದಲ್ಲಿ ವಿವಿಧ ರೈತರಿಗೆ ಸೇರಿದ ಗದ್ದೆಯಲ್ಲಿ ಭತ್ತದ ಸಸಿಗಳನ್ನು ಕಾಡಾನೆಗಳು (Elephants) ನಾಶ ಮಾಡಿವೆ. ಹಲವು ದಿನಗಳಿಂದ ತಾಲೂಕಿನ ವಿವಿಧ ಗ್ರಾಮಗಳಲ್ಲಿ ಈ ಎರಡು ಕಾಡಾನೆಗಳು ಬೀಡುಬಿಟ್ಟಿವೆ. ಎಲ್ಲೆಲ್ಲಿ ಆನೆ ಸಂಚಾರ? ಭಾನುವಾರ ಮೇಳಿಗೆ ಬ್ರಹ್ಮನಗುಡ್ಡದ ಕಾಡಿನಿಂದ ಮೃಗವಧೆ ಭಾಗಕ್ಕೆ ತೆರಳಿದ್ದ ಕಾಡಾನೆಗಳು ವಾಪಸಾಗಿವೆ. ಸೋಮವಾರ ಬೆಳಗ್ಗೆ ಕೊನ್ನೆರಿಪುರ ಮೂಲಕ ಮಹಿಷಿ, ದಬ್ಬಣಗದ್ದೆ ಭಾಗದ ಹೆಗ್ಗಾರು ಗುಡ್ಡ ಪ್ರವೇಶಿಸಿ ತೋಟ, ಗದ್ದೆ ಹಾನಿ ಮಾಡಿ ರೈತರಲ್ಲಿ ಆತಂಕ ಮೂಡಿಸಿದ್ದವು. ಮಂಗಳವಾರ ಬೆಳಗ್ಗೆ ಶಿವಮೊಗ್ಗ ತೀರ್ಥಹಳ್ಳಿ ಸಂಪರ್ಕದ ರಾಷ್ಟ್ರೀಯ ಹೆದ್ದಾರಿ 169 ದಾಟಿ ಕುನ್ನಳಿ ಗ್ರಾಮದಲ್ಲಿ ಭತ್ತದ ನಾಶ ಮಾಡಿ ಮಧ್ಯಾಹ್ನದ ವೇಳೆ ತ್ರಿಯಂಬಕಪುರ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗುಂಡಗದ್ದೆ ಗ್ರಾಮದಲ್ಲಿ ವಿಶ್ರಾಂತಿ ಪಡೆದಿವೆ. ಅರಣ್ಯ ಇಲಾಖೆ ಅಧಿಕಾರಿ, ಸಿಬ್ಬಂದಿ, ಸಾರ್ವಜನಿಕರು ಕಾಡಾನೆಗಳ ಸಂಚಾರವನ್ನು ತೀವ್ರ ನಿಗಾವಹಿಸಿ ಗಮನಿಸಿದರು.

"ಸ್ವಾತಂತ್ರ್ಯ ಹೋರಾಟಗಾರ `ಹೆಚ್.ಎಂ.ಶಿವಣ್ಣ' ನಿಧನ "

Image
"ಸ್ವಾತಂತ್ರ್ಯ ಹೋರಾಟಗಾರ `ಹೆಚ್.ಎಂ.ಶಿವಣ್ಣ' ನಿಧನ " ಹಾಸನ : ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ. ಶಿವಣ್ಣ (93) ಅವರು ವಯೋಸಹಜ ಅನಾರೋಗ್ಯದಿಂದ ಮಂಗಳವಾರ ಹಾಸನದ ಖಾಸಗಿ ಆಸ್ಪತ್ರೆಯಲ್ಲಿ ನಿಧನರಾದರು.  ಮೃತರಿಗೆ ಪತ್ನಿ, ಒಬ್ಬ ಪುತ್ರಿ ಹಾಗೂ ಇಬ್ಬರು ಪುತ್ರರು ಇದ್ದಾರೆ. ಚಾಮರಾಜನಗರ ಜಿಲ್ಲೆ ಅಂಗಳ ಗ್ರಾಮದ ಎಚ್.ಎಂ.ಶಿವಣ್ಣ 19320 ಮಾರ್ಚ್ 1ರಂದು ಜನಿಸಿದ್ದರು. ಸ್ವಾತಂತ್ರ್ಯ ಹೋರಾಟ ಸಂಗ್ರಾಮದ ನೆನಪಿನ ಕೊಂಡಿಯಾಗಿದ್ದ ಹಿರಿಯ ಸ್ವಾತಂತ್ರ್ಯ ಹೋರಾಟಗಾರ ಎಚ್.ಎಂ.ಶಿವಣ್ಣ ನಿಧನಕ್ಕೆ ಕಂದಾಯ ಸಚಿವರು ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಕೃಷ್ಣ ಬೈರೇಗೌಡ ಅವರಿ ಸಂತಾಪ ಸೂಚಿಸಿದ್ದಾರೆ. ಸ್ವಾತಂತ್ರ್ಯ ಹೋರಾಟದಲ್ಲಿ ಭಾಗವಹಿಸಿ ಸೆರೆವಾಸ ಅನುಭವಿಸಿದ್ದರು.ಐದು ದಶಕಗಳಿಂದ ಹಾನದಲ್ಲಿ ನೆಲೆಸಿದ್ದರು. ಹೋಂಗಾರ್ಡ್ ಕಮಾಂಡೆಂಟ್ ಆಗಿ ಸೇವೆ ಸಲ್ಲಿಸಿದ್ದರು.

"ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ : ಶೃಂಗೇರಿ"

Image
"ನೇಣು ಬಿಗಿದುಕೊಂಡು ಯುವಕ ಆತ್ಮಹತ್ಯೆ : ಶೃಂಗೇರಿ"     ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲೂಕಿನ ಪಟ್ಟಣದ ಸಂಕ್ಲಾಪುರ ನಿವಾಸಿ ಫಲಹ್(26) ಎಂಬ ಹದಿಹರೆಯ ಯುವಕ ನೆನ್ನೆ ರಾತ್ರಿ ಸಮಯದಲ್ಲಿ ನೇಣಿಗೆ ಶರಣಾದ ಘಟನೆ ನಡೆದಿದೆ.             ಈತ ಚಿಕ್ಕ ವಯಸ್ಸಿನಲ್ಲೇ ತಂದೆಯನ್ನು ಕಳೆದುಕೊಂಡು ಬಡತನದಲ್ಲಿ ಜೀವನವನ್ನು ಸಾಗಿಸುತ್ತಿದ್ದ  ಈತ ಶಾಮಿಯಾನ ಸೌಂಡ್ ಸಿಸ್ಟಮ್ ನ ಕೆಲಸ ಮಾಡಿಕೊಂಡು ತಾಯಿ ಹಾಗೂ ಅಜ್ಜಿಗೆ ಆಸರೆಯಾಗಿದ್ದ.           ಸೌಂಡ್ಸ್ ಕೆಲಸ ಮಾಡಿಕೊಂಡಿದ್ದ ಫಲಹ ಸಾಲ ಮಾಡಿಕೊಂಡಿದ್ದು ಇದರಿಂದ ಚಿಂತೆಗೀಡಾಗಿದ್ದ ಎನ್ನಲಾಗಿದೆ. ನಿಖರ ಕಾರಣ ಇನ್ನು ತಿಳಿದು ಬಂದಿಲ್ಲ ಪೊಲೀಸ್ ತನಿಕೆಯಿಂದ ತಿಳಿಯಬೇಕಿದೆ.          ಈ ವಿಚಾರ ಕುರಿತು ಶೃಂಗೇರಿ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದ್ದು ಪ್ರಕರಣ ದಾಖಲಾಗಿದೆ.

ಜಾತಿಗಣತಿಗೆ ಮೊದಲ ದಿನವೇ ಅಡಚಣೆ: ತಾಂತ್ರಿಕ ಸಮಸ್ಯೆಯಿಂದ ಕೇವಲ 10 ಸಾವಿರ ಜನರ ಮಾತ್ರ ಸಮೀಕ್ಷೆ..!

Image
ಜಾತಿಗಣತಿಗೆ ಮೊದಲ ದಿನವೇ ಅಡಚಣೆ: ತಾಂತ್ರಿಕ ಸಮಸ್ಯೆಯಿಂದ ಕೇವಲ 10 ಸಾವಿರ ಜನರ ಮಾತ್ರ ಸಮೀಕ್ಷೆ..! ಬೆಂಗಳೂರು : ವಿರೋಧ, ಗೊಂದಲ. ವಿವಾದದ ನಡುವೆ ಸೋಮವಾರದಿಂದ ಬೆಂಗಳೂರು ಹೊರತುಪಡಿಸಿ ರಾಜ್ಯಾದ್ಯಂತ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಜಾತಿಗಣತಿ ಆರಂಭವಾಗಿದೆ. ಆದರೆ, ತಾಂತ್ರಿಕ ಸಮಸ್ಯೆಯಿಂದಾಗಿ ಜಾತಿ ಗಣತಿಗೆ ಮೊದಲ ದಿನವೇ ಅಡಚಣೆ ಎದುರಾಗಿದೆ. 20 ಲಕ್ಷ ಗುರಿಯ ಬದಲು ಕೇವಲ 10 ಸಾವಿರ ಜನರ ಸಮೀಕ್ಷೆ ನಡೆಸಲಾಗಿದೆ. ಇಂಟರ್ನೆಟ್ ಇಲ್ಲದ ಕಡೆಗಳಲ್ಲಿ ಸಮೀಕ್ಷೆಯ ಕಾರ್ಯನಿರ್ವಹಿಸಿಲ್ಲ. ಅಂತಹ ಕಡೆ ಶಾಲೆ, ಅಂಗನವಾಡಿಗಳಲ್ಲಿ ವಿಶೇಷ ಶಿಬಿರ ತೆರೆಯಲಾಗುವುದು. ಸಮೀಕ್ಷೆ ಕಿಟ್ ಗಳನ್ನು ಕೆಲವು ಕಡೆ ವಿಳಂಬವಾಗಿ ವಿತರಿಸಲಾಗಿದೆ. ಕೆಲವು ಗಣತಿದಾರರಿಗೆ ಆಪ್ ಬಗ್ಗೆ ಸಂಪೂರ್ಣ ಮಾಹಿತಿ ಇಲ್ಲದಿರುವುದು ಕೂಡ ಗಣತಿಗೆ ಅಡ್ಡಿಯಾಗಿದೆ ಎಂದು ಹೇಳಲಾಗಿದೆ. ಇನ್ನು ಇಂಟರ್ನೆಟ್ ಇಲ್ಲದ ಕಡೆ ಆಪ್ ಕಾರ್ಯನಿರ್ವಹಿಸಿದ ಕಾರಣ ಗ್ರಾಮೀಣ ಪ್ರದೇಶಗಳಲ್ಲಿ ಶಾಲೆ, ಅಂಗನವಾಡಿಗಳಲ್ಲಿ ವಿಶೇಷ ಶಿಬಿರ ಆಯೋಜಿಸಿ ಗಣತಿ ನಡೆಸಲು ಆಯೋಗ ಕ್ರಮ ಕೈಗೊಂಡಿದೆ. ಮೊದಲ ದಿನ ಗಣತಿದಾರರು ಗಕಿಟ್ ಸಂಗ್ರಹಿಸುವುದು, ಬ್ಲಾಕ್ ಪತ್ತೆ ಮಾಡಿಕೊಂಡು ಸ್ಥಳ ಪರಿಶೀಲನೆ ನಡೆಸುವುದು, ಆಪ್ ಡೌನ್ಲೋಡ್, ತಾಂತ್ರಿಕ ಸಮಸ್ಯೆ, ನೆಟ್ವರ್ಕ್ ಸಮಸ್ಯೆ, ಒಟಿಪಿ ಬಾರದಿರುವಂತಹ ಸಣ್ಣ ಪುಟ್ಟ ಸಮಸ್ಯೆಯಾಗಿದ್ದು, ಮಂಗಳವಾರದಿಂದ ಸಮೀಕ್ಷೆಗೆ ವೇಗ ಸಿಗುತ್ತದೆ ಎಂದು ಶಾಶ್ವತ ಹಿಂದುಳಿದ ...

"40ವರ್ಷ ಸತತ ಪಕ್ಷದ ಕಾರ್ಯಕರ್ತ ಸಂಕಷ್ಟಕ್ಕೆ ತಾಲೂಕು ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಿಂದ ಆರ್ಥಿಕ ನೆರವು...!"

Image
"40ವರ್ಷ ಸತತ ಪಕ್ಷದ ಕಾರ್ಯಕರ್ತ ಸಂಕಷ್ಟಕ್ಕೆ ತಾಲೂಕು ಯೂತ್ ಕಾಂಗ್ರೆಸ್ ಉಪಾಧ್ಯಕ್ಷರಿಂದ ಆರ್ಥಿಕ ನೆರವು...!" ಕೊಪ್ಪ : ಸೆಪ್ಟೆಂಬರ್/22 / ಸೋಮವಾರ ಚಿಕ್ಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕಿನ ಭಂಡಿಗಡಿಯಲ್ಲಿ ಕಾಂಗ್ರೆಸ್ ಪಕ್ಷಕ್ಕೆ ಸತತ 40 ವರ್ಷಗಳ ಕಾಲ ದುಡಿದ ಕಾರ್ಯಕರ್ತರಾದ ಬಿಎಸ್ ರವಿರಾಜ್ ಪೂಜಾರಿ, ರುದ್ರಾಕ್ಷಿ ಬೈಲು, ಭಂಡಿಗಡಿ ಇವರು ವೃತ್ತಿಯಲ್ಲಿ ಟೈಲರಿಂಗ್ ಕೆಲಸ ಮಾಡಿ ಜೀವನ ಸಾಗಿಸುತ್ತಿದ್ದು ಇವರು ಪರಿಸ್ಥಿತಿ ಆರ್ಥಿಕವಾಗಿ ತೀವ್ರ ಹದಗೆಟ್ಟಿರುತ್ತದೆ.    ದುರದೃಷ್ಟವಶಾತ್ ಬಿ ಎಸ್ ರವಿರಾಜ್ ಪೂಜಾರಿ ಅವರ ಆರೋಗ್ಯ ಪರಿಸ್ಥಿತಿಯು ತೀವ್ರವಾಗಿ ಹದಗೆಟ್ಟಿದ್ದು ಅವರಿಗೆ (Chronic kidney disease)ಆಗಿದ್ದು ಡಯಾಲಿಸಿಸ್ ಹಂತಕ್ಕೆ ಒಳಗಾಗಿರುತ್ತಾರೆ.          ಬಿ ಎಸ್ ರವಿರಾಜ್ ಪೂಜಾರಿಯವರು ಕಾಂಗ್ರೆಸ್ ಪಕ್ಷದಲ್ಲಿ ನಿರಂತರವಾಗಿ 40 ವರ್ಷಗಳ ಕಾಲ ಹಿರಿಯ ಕಾರ್ಯಕರ್ತರಾಗಿ ಕಾರ್ಯ ನಿರ್ವಹಿಸುತ್ತಾ ಬಂದಿದ್ದ ಇವರನ್ನು ಗುರುತಿಸಿ ಸಂದರ್ಭವನ್ನು ಅರಿತ ತಾಲೂಕು ಯುತ್ ಕಾಂಗ್ರೆಸ್ ಉಪಾಧ್ಯಕ್ಷರಾದ "ನಿಜಾಮ್ ಭಂಡಿಗಡಿ"  ಅವರು, ತನ್ನ ಸ್ನೇಹಿತರೊಂದಿಗೆ ಬಿಎಸ್ ರವಿರಾಜ್ ಪೂಜಾರಿ ಅವರ ಮನೆಗೆ ಭೇಟಿ ನೀಡಿ, ಸಂಕಷ್ಟದಲ್ಲಿರುವ ಅವರಿಗೆ, ಆರೋಗ್ಯ ಸಮಾಚಾರವನ್ನು ವಿಚಾರಿಸಿ ಆತ್ಮಸ್ಥೈರ್ಯವನ್ನು ತುಂಬಿ ಆದಷ್ಟು ಬೇಗ ಅವರು ಗುಣಮುಖವಾಗ...

"ಹೆತ್ತ ತಾಯಿಯು 3ನೇ ಮಗುವನ್ನು ಕಾಲುವೆಗೆ ಎಸೆದು ಕೊಲೆ:ತಾಯಿ ಜೈಲು ಪಾಲು"

Image
"ಹೆತ್ತ ತಾಯಿಯು 3ನೇ ಮಗುವನ್ನು ಕಾಲುವೆಗೆ ಎಸೆದು ಕೊಲೆ:ತಾಯಿ ಜೈಲು ಪಾಲು"           ಬಳ್ಳಾರಿ   : ಜಿಲ್ಲೆಯ ಸಂಡೂರು ತಾಲೂಕಿನ ತೋರಣಗಲ್ ನಲ್ಲಿ ತಾಯಿಯೊಬ್ಬಳು ಮೂರನೇ ಮಗು ಹೆಣ್ಣು ಹುಟ್ಟಿದ್ದಾಳೆ ಎಂಬ ಕಾರಣಕ್ಕೆ ಬೇಸತ್ತ ತಾಯಿ ತನ್ನ ಎರಡು ತಿಂಗಳ ಹಸುಗೂಸನ್ನು ಕಾಲುವೆಗೆ ಎಸೆದು ಕೊಲೆ ಮಾಡಿರುವ ಘಟನೆ ನಡೆದಿದೆ.          ಬಿಹಾರ ಮೂಲದ ಪ್ರಿಯಾಂಕಾ ದೇವಿ ಮತ್ತು ಸರೋಜ್ ಕುಮಾರ್ ದಂಪತಿಗಳಿಗೆ ಜನಿಸಿದ ಮಗು 3ನೇ ಹೆಣ್ಣು ಮಗು ಆಗಿತ್ತು. ಈ ಮೊದಲೇ ಜನಿಸಿದ ಮಕ್ಕಳಿಬ್ಬರು ಹೆಣ್ಣು ಮಕ್ಕಳಾಗಿದ್ದ ಕಾರಣ ಮೂರನೇ ಹೆಣ್ಣು ಮಗುವನ್ನು ಕಾಲುವೆಗೆ ಎಸೆದು ಕೊಲೆ ಮಾಡಿ ಮಗು ಕಾಣೆಯಾಗಿದೆ ಎಂದು ನಾಟಕವಾಡಿದ್ದಳು ಪೊಲೀಸರು ಸಿ ಸಿ ಟಿವಿ ಕ್ಯಾಮೆರಾವನ್ನು ಪರೀಕ್ಷಿಸಿ ಪರಿಶೀಲಿಸಿ ತನಿಖೆನಡೆಸಿದಾಗ ಈ ಘಟನೆ ಬೆಳಕಿಗೆ ಬಂದಿದೆ.            ಈ ಹಿನ್ನೆಲೆಯಲ್ಲಿ ಬಳ್ಳಾರಿ ಯ ತೋರಣಗಲ್ ಪೊಲೀಸರು ಪ್ರಿಯಾಂಕ ದೇವಿಯನ್ನು ರವಿವಾರ ಜೈಲಿಗಟ್ಟಿದ್ದಾರೆ.

"ಆಂಧ್ರದ ನೆಲ್ಲೂರಿನಲ್ಲಿ ಭೀಕರ ರಸ್ತೆ ಅಪಘಾತ; ಮಗು ಸೇರಿದಂತೆ 7 ಜನ ಸಾವು..!"

Image
"ಆಂಧ್ರದ ನೆಲ್ಲೂರಿನಲ್ಲಿ ಭೀಕರ ರಸ್ತೆ ಅಪಘಾತ; ಮಗು ಸೇರಿದಂತೆ 7 ಜನ ಸಾವು..!" ಆಂಧ್ರ ಪ್ರದೇಶ : ನೆಲ್ಲೂರು, ಸೆಪ್ಟೆಂಬರ್ 17: ನೆಲ್ಲೂರಿನ ಸಂಗಮ್ ಮಂಡಲದ ರಾಷ್ಟ್ರೀಯ ಹೆದ್ದಾರಿಯಲ್ಲಿ ಪೆರಮನ್ ಬಳಿ ಇಂದು ಟಿಪ್ಪರ್ ಲಾರಿಯೊಂದು ಕಾರಿಗೆ ಡಿಕ್ಕಿ ಹೊಡೆದ ಪರಿಣಾಮದಿಂದ ಮಗು ಸೇರಿದಂತೆ 7 ಜನರು ಸಾವನ್ನಪ್ಪಿದ್ದಾರೆ. ರಸ್ತೆಯಲ್ಲಿ ಅತಿ ವೇಗವಾಗಿ ಬರುತ್ತಿದ್ದ ಟಿಪ್ಪರ್ ಕಾರಿಗೆ ಡಿಕ್ಕಿ ಹೊಡೆದಿದೆ. ಇದರ ಪರಿಣಾಮದಿಂದ ವಾಹನವು ಲಾರಿಯ ಕೆಳಗೆ ನಜ್ಜುಗುಜ್ಜಾಗಿದ್ದು, ವಾಹನದಲ್ಲಿದ್ದವರು ಮೃತಪಟ್ಟಿದ್ದಾರೆ.                  ಈ ಅಪಘಾತದ ಸಮಯದಲ್ಲಿ ಕಾರು ನೆಲ್ಲೂರಿನಿಂದ ಕಡಪದ ಕಡೆಗೆ ಸಾಗುತ್ತಿತ್ತು.ಮುಖ್ಯಮಂತ್ರಿ ಎನ್. ಚಂದ್ರಬಾಬು ನಾಯ್ಡು ಈ ದುರಂತ ಅಪಘಾತದ  ಬಗ್ಗೆ ಆಘಾತ ವ್ಯಕ್ತಪಡಿಸಿದ್ದಾರೆ. ಮೃತರ ಕುಟುಂಬಗಳಿಗೆ ಸಂಪೂರ್ಣ ಬೆಂಬಲ ಮತ್ತು ನೆರವು ನೀಡುವಂತೆ ಅವರು ಅಧಿಕಾರಿಗಳಿಗೆ ನಿರ್ದೇಶನ ನೀಡಿದ್ದಾರೆ.