Posts

Showing posts from January, 2026

"ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಯುವಕನ ಮೃತದೇಹ..!"

Image
"ಅನುಮಾನಾಸ್ಪದ ರೀತಿಯಲ್ಲಿ ಪತ್ತೆಯಾದ ಯುವಕನ ಮೃತದೇಹ..!" ಶೃಂಗೇರಿ : ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ತಾಲ್ಲೂಕಿನ ವಿದ್ಯಾರಣ್ಯಪುರ ದಲ್ಲಿ ಸ್ಟುಡಿಯೋ ಫೋಟೋಗ್ರಾಫರ್ ಅಶ್ವಥ್ ಆಚಾರ್ಯ (30) ಅನುಮಾನಾಸ್ಪದವಾಗಿ ಮೃತಪಟ್ಟಿದ್ದಾರೆ. ಇಂದು ಬೆಳಗ್ಗೆ ಮನೆಯ ಹಿಂದಿನ ತೋಟದಲ್ಲಿ ಅವರ ಮೃತದೇಹ ಪತ್ತೆಯಾಗಿದೆ. ಶೃಂಗೇರಿ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದು, ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ರವಾನಿಸಿದ್ದಾರೆ. ಅಶ್ವಥ್‌ ಅವರ ಸಾವು ಕೊಲೆಯೋ ಅಥವಾ ಆತ್ಮಹತ್ಯೆಯೋ ಎಂಬುದು ಪೊಲೀಸರ ತನಿಖೆಯಿಂದಷ್ಟೇ ತಿಳಿದುಬರಬೇಕಿದೆ. ಮೃತನ ಕುಟುಂಬದವರು ಹಾಗೂ ಸ್ನೇಹಿತರು ಆತನ ಸಾವು ಕೊಲೆಯಾಗಿರಬಹುದು ಎಂದು ಶಂಕೆ ವ್ಯಕ್ತಪಡಿಸಿದ್ದಾರೆ.

"ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಅವಮಾನ: 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ..!"

Image
"ಪರೀಕ್ಷೆಯಲ್ಲಿ ಕಡಿಮೆ ಅಂಕ ಪಡೆದಿದ್ದಕ್ಕೆ ಅವಮಾನ: 10ನೇ ತರಗತಿ ವಿದ್ಯಾರ್ಥಿನಿ ಆತ್ಮಹತ್ಯೆ..!" ಚಿಕ್ಕಮಗಳೂರಿ: ಜಿಲ್ಲೆಯ   ಕಡೂರಿನಲ್ಲಿ 10ನೇ ತರಗತಿಯ ಗಾನವಿ ಎಂಬಾಕೆ ಆತ್ಮಹತ್ಯೆಗೆ ಶರಣಾಗಿದ್ದಾಳೆ. ಜ.20ರಂದು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಆಕೆ ಚಿಕಿತ್ಸೆ ಫಲಿಸದೆ ಇಂದು ಸಾವನ್ನಪ್ಪಿದ್ದಾಳೆ. 500ಕ್ಕೆ 93 ಅಂಕ ಪಡೆದಿದ್ದ ವಿದ್ಯಾರ್ಥಿನಿಯನ್ನು ಬಿಇಒ ಗದರಿಸಿ, ಇಷ್ಟು ಕಡಿಮೆ ಮಾರ್ಕ್ಸ್ ತೆಗೆದುಕೊಂಡು ನೀನು ಪಾಸ್ ಆಡ್ತೀಯಾ? ಎಂದು ಅವಮಾನಿಸಿದ್ದರು. ಈ ಘಟನೆಯಿಂದ ಮಾನಸಿಕವಾಗಿ ಕುಗ್ಗಿದ್ದ ವಿದ್ಯಾರ್ಥಿನಿ, ಮೂರನೇ ಪೂರ್ವ ಸಿದ್ಧತಾ ಪರೀಕ್ಷೆಯಲ್ಲೂ ಫೇಲ್ ಆಗುವ ಭಯದಿಂದ ಈ ಕೃತ್ಯ ಎಸಗಿದ್ದಾಳೆ ಎಂದು ಕುಟುಂಬಸ್ಥರು ಆರೋಪಿಸಿದ್ದಾರೆ.

ಚನ್ನರಾಯಪಟ್ಟಣ :ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ – ಹೆಡ್‌ಕಾನ್ಸ್‌ಟೇಬಲ್‌ ಸಾವು..!

Image
ಚನ್ನರಾಯಪಟ್ಟಣ :ಬೈಕ್‌ಗೆ ಸಾರಿಗೆ ಬಸ್ ಡಿಕ್ಕಿ – ಹೆಡ್‌ಕಾನ್ಸ್‌ಟೇಬಲ್‌ ಸಾವು..! ಹಾಸನ: ಬೈಕ್‌ ಹಾಗೂ ಸಾರಿಗೆ ಬಸ್ ನಡುವೆ ನಡೆದ ಅಪಘಾತದಲ್ಲಿ (Accident) ಹೆಡ್‌ಕಾನ್ಸ್‌ಟೇಬಲ್‌ ಸಾವನ್ನಪ್ಪಿದ ಘಟನೆ ಚನ್ನರಾಯಪಟ್ಟಣದಲ್ಲಿ ನಡೆದಿದೆ. ಚನ್ನರಾಯಪಟ್ಟಣ ನಗರ ಪೊಲೀಸ್ ಠಾಣೆಯಲ್ಲಿ ರೈಟರ್ ಆಗಿದ್ದ ಬೀರಲಿಂಗ (41) ಮೃತಪಟ್ಟ ಮುಖ್ಯಪೇದೆ. ಮಧ್ಯಾಹ್ನ ಪೊಲೀಸ್ ಕ್ವಾಟರ್ಸ್‌ನಲ್ಲಿರುವ ಮನೆಗೆ ಊಟಕ್ಕೆ ಬೈಕ್‌ನಲ್ಲಿ ತೆರಳುತ್ತಿದ್ದರು.ಈ ವೇಳೆ ಸಾರಿಗೆ ಬಸ್‌ ಬೈಕ್‌ಗೆ ಡಿಕ್ಕಿಯಾಗಿದೆ. ತೀವ್ರವಾಗಿ ಗಾಯಗೊಂಡಿದ್ದ ಬೀರಲಿಂಗ ಅವರನ್ನು ಬೆಳ್ಳೂರಿನ ಬಿಜಿಎಸ್ ಆಸ್ಪತ್ರೆಗೆ ಸಾಗಿಸುವ ಮಾರ್ಗ ಮಧ್ಯೆ ಸಾವನ್ನಪ್ಪಿದ್ದಾರೆ.

ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ನಾಳೆಯಿಂದ ಎರಡು ದಿನ ವಿದ್ಯುತ್ ವ್ಯತ್ಯಯ..!

Image
ಸಾರ್ವಜನಿಕ ಪ್ರಕಟಣೆ..! " ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ ತಾಲ್ಲೂಕುಗಳಲ್ಲಿ ನಾಳೆಯಿಂದ ಎರಡು ದಿನ ವಿದ್ಯುತ್ ವ್ಯತ್ಯಯ..!" ಚಿಕ್ಕಮಗಳೂರು:  ಜಿಲ್ಲೆಯ ಕಾರ್ಯಚರಣೆ ವಿಭಾಗ ವ್ಯಾಪ್ತಿಯ ಜೇನುಗದ್ದೆ-ಬಾಳೆಹೊನ್ನೂರು ಡಿ.ಸಿ ಮಾರ್ಗದಲ್ಲಿ ಗೋಪುರ ಸದರಿ ಗೋಪುರವನ್ನು ದಿನಾಂಕ: 31.01.2026 ಮತ್ತು ದಿನಾಂಕ:01.02.2026 ರಂದು ಬದಲಾಯಿಸುವುದರಿಂದ, ಆ ದಿನದಂದು ಬಾಳೆಹೊನ್ನೂರು ವಿದ್ಯುತ್‌ ವಿತರಣಾಕೇಂದ್ರದಿಂದ ಹೊರಹೊಮ್ಮುವ ಮೆಸ್ಕಾಂ ಕೊಪ್ಪ ವಿಭಾಗದ ಶೃಂಗೇರಿ ತಾಲ್ಲೂಕು,  ಕೊಪ್ಪ ತಾಲ್ಲೂಕು ಮತ್ತು ನರಸಿಂಹರಾಜಪುರ ತಾಲ್ಲೂಕುಗಳಲ್ಲಿ 31.01.2026 ಹಾಗೂ 01.02.2026 ರಂದು ಬೆಳಗ್ಗೆ 6:00 20 ಸಂಜೆ 06:00 ರವರೆಗೆ ವಿದ್ಯುತ್ ವ್ಯತ್ಯಯ ಉಂಟಾಗಲಿದೆ. " ಮಗದೊಮ್ಮೆ ವಿವರಿಸುತ್ತೇವೆ:" ಸಮಯ: 2026ರ ಜನವರಿ 31ರ ಶನಿವಾರ ಬೆಳಿಗ್ಗೆ 6:00 ಗಂಟೆಯಿಂದ ಫೆಬ್ರವರಿ 1ರ ಭಾನುವಾರ ಸಂಜೆ 6:00 ಗಂಟೆಯವರೆಗೆ ವಿದ್ಯುತ್ ಪೂರೈಕೆಯಲ್ಲಿ ವ್ಯತ್ಯಯವಿರುತ್ತದೆ. ಕಾರಣ: ಕರ್ನಾಟಕ ವಿದ್ಯುತ್ ಪ್ರಸರಣ ನಿಗಮ ನಿಯಮಿತ (KPTCL) ವತಿಯಿಂದ ನಡೆಯಲಿರುವ ತುರ್ತು ನಿರ್ವಹಣಾ ಕಾರ್ಯದ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಪೀಡಿತ ಪ್ರದೇಶಗಳು: ಶೃಂಗೇರಿ, ಕೊಪ್ಪ ಮತ್ತು ನರಸಿಂಹರಾಜಪುರ (N.R. Pura) ತಾಲ್ಲೂಕುಗಳ ಎಲ್ಲಾ ಭಾಗಗಳು.          ಸಾರ್ವಜನಿಕರು ಸಹಕರಿಸಬೇಕಾಗಿ ಕ...

ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಕಾರು : ರಿಕ್ಷಾ ಸವಾರ ಮೃತ್ಯು

Image
ರಿಕ್ಷಾಕ್ಕೆ ಡಿಕ್ಕಿ ಹೊಡೆದು ಪರಾರಿಯಾದ ಕಾರು : ರಿಕ್ಷಾ ಸವಾರ ಮೃತ್ಯು ಸುಳ್ಯ : ಅಟೋರಿಕ್ಷಾವೊಂದಕ್ಕೆ ಹಿಂದಿನಿಂದ ಕಾರು ಡಿಕ್ಕಿಯಾಗಿ ರಸ್ತೆಗೆ ಬಿದ್ದ ಅಟೋ ರಿಕ್ಷಾದ ಚಾಲಕ ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಟಿಪ್ಪ‌ರ್ ವಾಹನದ ಅಡಿಗೆ ಬಿದ್ದ ಪರಿಣಾಮ ಚಾಲಕ ಸ್ಥಳದಲ್ಲೇ ಸಾವನ್ನಪ್ಪಿದ ಘಟನೆ ಮಾಣಿ – ಮೈಸೂರು ಹೆದ್ದಾರಿಯ ಕೊಡಗು ಸಂಪಾಜೆ ಗೇಟ್ ಬಳಿ ಇಂದು (ಜ.29ರ, ಗುರುವಾರ) ಸಂಭವಿಸಿದೆ. ಸುಂದರ ಚಿಟ್ಟಿಕಾನ (56) ಮೃತ ಅಟೋರಿಕ್ಷಾ ಚಾಲಕ. ಅಟೋರಿಕ್ಷಾ ಸಂಪಾಜೆ ಗೇಟಿನಿಂದ ಚೆಡಾವು ಕಡೆ ತೆರಳುತ್ತಿದ್ದು ಕೊಡಗು- ಸಂಪಾಜೆ ಪೆಟ್ರೋಲ್ ಪಂಪ್ ಬಳಿಯ ತಿರುವಿನಲ್ಲಿ ಹಿಂದಿನಿಂದ ಬಂದ ಕಾರು ಅಟೋರಿಕ್ಷಾಕ್ಕೆ ಗುದ್ದಿ ಪರಾರಿಯಾಗಿದೆ. ಈ ವೇಳೆ ಅಟೋ ಚಾಲಕ ರಸ್ತೆಗೆ ಬಿದ್ದಿದ್ದು, ಎದುರಿನಿಂದ ಬರುತ್ತಿದ್ದ ಟಿಪ್ಪರ್ ಲಾರಿ ಅಡಿಗೆ ರಿಕ್ಷಾ ಚಾಲಕ ಬಿದ್ದು ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಅಟೋ ರಿಕ್ಷಾದಲ್ಲಿದ್ದ ಇನ್ನೋರ್ವ ಪ್ರಯಾಣಿಕನಿಗೂ ಗಾಯಗಳಾಗಿದೆ ಎಂದು ತಿಳಿದುಬಂದಿದೆ. ಸ್ಥಳೀಯ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಅಪಘಾತ ಎಸಗಿದ ಕಾರು ನಿಲ್ಲಿಸದೇ ಅಲ್ಲಿಂದ ತೆರಳಿದೆ.

ನಿಂತಿದ್ದ ಬೋರ್​ವೆಲ್​ ಲಾರಿಗೆ ಗುದ್ದಿದ ಬೊಲೆರೋ: ಓರ್ವ ಸ್ಥಳದಲ್ಲೇ ಸಾವು, 6 ಜನರ ಸ್ಥಿತಿ ಗಂಭೀರ..!

Image
ನಿಂತಿದ್ದ ಬೋರ್​ವೆಲ್​ ಲಾರಿಗೆ ಗುದ್ದಿದ ಬೊಲೆರೋ: ಓರ್ವ ಸ್ಥಳದಲ್ಲೇ ಸಾವು, 6 ಜನರ ಸ್ಥಿತಿ ಗಂಭೀರ..! ಕಲ್ಲತ್ತಿಗಿರಿಯಿಂದ ಎಂ.ಸಿ. ಹಳ್ಳಿಗೆ ಕಾರ್ಮಿಕರನ್ನು ಕರೆದುಕೊಂಡು ವಾಪಸಾಗುತ್ತಿದ್ದ ಬೊಲೆರೋ ಜೀಪ್​ ದಾರಿ ಮಧ್ಯೆ ಬೋರ್​ವೆಲ್​ ಲಾರಿಗೆ ಡಿಕ್ಕಿ ಹೊಡೆದಿದೆ. ತರೀಕೆರೆ:     ನಿಂತಿದ್ದ ಬೋರ್​ವೆಲ್​ ಲಾರಿಗೆ ವೇಗವಾಗಿ ಬಂದ ಬೊಲೆರೋ ಜೀಪ್​ ಡಿಕ್ಕಿ ಹೊಡೆದ ಪರಿಣಾಮ ಓರ್ವ ಸ್ಥಳದಲ್ಲೇ ಸಾವನ್ನಪ್ಪಿ, 6 ಮಂದಿ ಗಂಭೀರವಾಗಿ ಗಾಯಗೊಂಡಿರುವ ಘಟನೆ ಚಿಕ್ಕಮಗಳೂರು ಜಿಲ್ಲೆಯ ತರೀಕೆರೆ ತಾಲೂಕಿನ ದೋರನಾಳು ಗ್ರಾಮದ ಹೊರವಲಯದಲ್ಲಿ ಬುಧವಾರ ರಾತ್ರಿ ಸಂಭವಿಸಿದೆ. ಲಾರಿಗೆ ಜೀಪ್ ಡಿಕ್ಕಿ ಹೊಡೆದ ರಭಸಕ್ಕೆ ಜೀಪ್ ಸಂಪೂರ್ಣವಾಗಿ ನಜ್ಜುಗುಜ್ಜಾಗಿದ್ದು, ಬೊಲೆರೋ ಜೀಪ್‌ನಲ್ಲಿದ್ದ 7 ಜನರಲ್ಲಿ ಓರ್ವ ಸ್ಥಳದಲ್ಲೇ ಸಾವನಪ್ಪಿದ್ದಾನೆ. ತೀವ್ರವಾಗಿ ಗಾಯಗೊಂಡ 6 ಜನರ ಪರಿಸ್ಥಿತಿ ಚಿಂತಾಜನಕವಾಗಿದ್ದು, ಕೂಡಲೇ ಸ್ಥಳೀಯರು ಗಾಯಾಳುಗಳನ್ನು ತರೀಕೆರೆ ಸರ್ಕಾರಿ ಆಸ್ಪತ್ರೆಗೆ ದಾಖಲು ಮಾಡಿದರು. ಪ್ರಾಥಮಿಕ ಚಿಕಿತ್ಸೆ ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಅವರನ್ನು ಶಿವಮೊಗ್ಗದ ಜಿಲ್ಲಾಸ್ಪತ್ರೆ ಮೆಗ್ಗಾನ್​ಗೆ ರವಾನೆ ಮಾಡಲಾಗಿದೆ. ತರೀಕೆರೆ ತಾಲೂಕಿನ ಎಂ.ಸಿ. ಹಳ್ಳಿಯಿಂದ ಬೊಲೆರೋ ಜೀಪ್​ನಲ್ಲಿ ಕಾರ್ಮಿಕರು ಕೂಲಿ ಕೆಲಸಕ್ಕೆ ಕಲ್ಲತ್ತಿಗಿರಿಗೆ ಹೋಗಿದ್ದರು. ಕಲ್ಲತ್ತಿಗಿರಿಯಿಂದ ಎಂ.ಸಿ...

ತೀರ್ಥಹಳ್ಳಿ: ಮಂಗನ ಕಾಯಿಲೆಗೆ ಯುವಕ ಸಾವು..!

Image
ತೀರ್ಥಹಳ್ಳಿ: ಮಂಗನ ಕಾಯಿಲೆಗೆ ಯುವಕ ಸಾವು..! ಶಿವಮೊಗ್ಗ : ಕ್ಯಾಸನೂರು ಫಾರೆಸ್ಟ್‌ ಡಿಸೀಸ್‌ (ಮಂಗನ ಕಾಯಿಲೆ) ಸೋಂಕಿತ ತೀರ್ಥಹಳ್ಳಿ ತಾಲೂಕಿನ ಕಟಗಾರು ಗ್ರಾಮದ 29 ವರ್ಷದ ಯುವಕ ಸೋಂಕಿನಿಂದಾಗಿ ಮಣಿಪಾಲ್ ಆಸ್ಪತ್ರೆಯಲ್ಲಿ ಚಿಕಿತ್ಸೆ ಫಲಕಾರಿಯಾಗದೇ ಮೃತಪಟ್ಟಿದ್ದಾರೆ. ಯುವಕ ಜನವರಿ 20ರಿಂದ ತೀವ್ರ ಜ್ವರದಿಂದ ಬಳಲುತ್ತಿದ್ದರು. ಸ್ಥಳೀಯವಾಗಿ ಚಿಕಿತ್ಸೆ ಪಡೆದರೂ ಜ್ವರದ ತೀವ್ರತೆ ಕಡಿಮೆಯಾಗಿರಲಿಲ್ಲ. ಕಳೆದ ಭಾನುವಾರ ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಉಡುಪಿಯ ಮಣಿಪಾಲ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಬುಧವಾರ ಕೊನೆಯುಸಿರೆಳೆದಿದ್ದಾರೆ ಎಂದು ತಿಳಿದುಬಂದಿದೆ. ಜಿಲ್ಲಾ ಆರೋಗ್ಯ ಇಲಾಖೆಯು ಈಗಾಗಲೇ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡಿದೆ. ಕಟಗಾರು ಮತ್ತು ಸುತ್ತಮುತ್ತಲ ಗ್ರಾಮಗಳಲ್ಲಿ ಜ್ವರದ ಲಕ್ಷಣವಿರುವವರ ತಪಾಸಣೆಗೆ ಸೂಚಿಸಿದೆ. ಮಂಗಗಳು ಸತ್ತಿರುವುದು ಕಂಡುಬಂದಲ್ಲಿ ಕೂಡಲೇ ಮಾಹಿತಿ ನೀಡುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಲಾಗಿದೆ.

ದುರಂತದಲ್ಲಿ ಚೂರುಚೂರಾದ Learjet 45 ವಿಮಾನ, ಅಜಿತ್‌ ಪವಾರ್‌ ದೇಹ ಸುಟ್ಟು ಭಸ್ಮ..!

Image
ದುರಂತದಲ್ಲಿ ಚೂರುಚೂರಾದ Learjet 45 ವಿಮಾನ, ಅಜಿತ್‌ ಪವಾರ್‌ ದೇಹ ಸುಟ್ಟು ಭಸ್ಮ..! ಮಹಾರಾಷ್ಟ್ರ (ಜ.28): ವಿಮಾನ ಅಪಘಾತದಲ್ಲಿ ದುರಂತವಾಗಿ ಸಾವು ಕಂಡ 66 ವರ್ಷದ ಅಜಿತ್‌ ಪವಾರ್‌ Learjet 45 ಸಣ್ಣ ವಿಮಾನದಲ್ಲಿ ಪ್ರಯಾಣ ಮಾಡುತ್ತಿದ್ದರು. ಅಪಘಾತ ಎಷ್ಟು ಗಂಭೀರವಾಗಿತ್ತೆಂದರೆ, Bombardier Aerospace ನಿರ್ಮಾಣದ ಈ ವಿಮಾನ ಚೂರು ಚೂರಾಗಿ ಹೊಲದಲ್ಲಿ ಬಿದ್ದಿತ್ತು. ಚೂರು ಚೂರಾಗಿ ಬಿದ್ದ ವಿಮಾನಗಳ ನಡುವೆ ಅಜಿತ್‌ ಪವಾರ್‌ ಅವರ ದೇಹ ಸುಟ್ಟು ಭಸ್ಮವಾಗಿತ್ತು. ಮೊದಲ ನೋಟದಲ್ಲಿಯೇ ಇದರಲ್ಲಿದ್ದ ಯಾವುದೇ ಪ್ರಯಾಣಿಕರು ಬದುಕಿಳಿದಿರುವ ಸಾಧ್ಯತೆಯೇ ಇಲ್ಲ ಎಂದನಿಸಿತ್ತು. ಇಂದು ಬೆಳಿಗ್ಗೆ ಮಹಾರಾಷ್ಟ್ರದ ಬಾರಾಮತಿ ಯಲ್ಲಿ ಸಂಭವಿಸಿದ ವಿಮಾನ ಅಪಘಾತದ ನಂತರ ಮಹಾರಾಷ್ಟ್ರ ಉಪಮುಖ್ಯಮಂತ್ರಿ ಅಜಿತ್ ಪವಾರ್ ಸಾವು ಕಂಡಿದ್ದಾರೆ ಎಂದು ನಾಗರಿಕ ವಿಮಾನಯಾನ ನಿರ್ದೇಶನಾಲಯ ದೃಢಪಡಿಸಿದೆ. ಡಿ.ಜಿ.ಸಿ.ಎ ಆ ಬಳಿಕ ವಿಮಾನ ಪ್ರಯಾಣದ ವಿವರ ಹಾಗೂ ವಿಮಾನದ ಮಾಹಿತಿಯನ್ನೂ ಪ್ರಾಥಮಿಕ ಮಧ್ಯಂತರ ವರದಿಯಲ್ಲಿ ಹಂಚಿಕೊಂಡಿದೆ. ಬುಧವಾರ ಬೆಳಗ್ಗೆ ಈ ಅಪಘಾತ ಸಂಭವಿಸಿದ್ದು, ಏರ್‌ಕ್ರಾಫ್ಟ್‌ Learjet 45 ಮಾದರಿಯದ್ದಾಗಿದೆ. ಇದನ್ನು ವಿಎಸ್‌ಆರ್‌ ಆಪರೇಟ್‌ ಮಾಡುತ್ತಿತ್ತು.VT-SSK ಎನ್ನುವ ಹೆಸರಲ್ಲಿ ವಿಮಾನ ನೋಂದಣಿಯಾಗಿತ್ತು. ಬಾರಾಮತಿ ಏರ್‌ಪೋರ್ಟ್‌ ಸಮೀಪ ಅಪಘಾತಕ್ಕೆ ಈಡಾಗಿದ್ದು, ವಿಮಾನದಲ್ಲಿ ಸಿಬ್ಬಂದಿ ಸೇರಿ 5 ...

"ಬೆಳ್ಳಮ್ ಬೆಳಿಗ್ಗೆ ಕಾರ್ ಹಾಗೂ ಬೈಕ್ ನಡುವೆ ಮುಕಾಮುಖಿ ಡಿಕ್ಕಿ: ಬೈಕ್ ಚಾಲಕ ಆಸ್ಪತ್ರೆಗೆ ದಾಖಲು "

Image
"ಬೆಳ್ಳಮ್ ಬೆಳಿಗ್ಗೆ ಕಾರ್ ಹಾಗೂ ಬೈಕ್ ನಡುವೆ ಮುಕಾಮುಖಿ ಡಿಕ್ಕಿ: ಬೈಕ್ ಚಾಲಕ ಆಸ್ಪತ್ರೆಗೆ ದಾಖಲು "   ಹರಿಹರಪುರ : ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಹರಿಹರ ಪುರದಲ್ಲಿ ಬೆಳ್ಳಂ ಬೆಳಗ್ಗೆ ಸುಮಾರು 9:00 am ಗೆ ಕೊಪ್ಪದಿಂದ ಬರುತ್ತಿದ್ದ ಕಾರೊಂದಕ್ಕೆ ಬೈಕ್ ಚಾಲಕ ನ ಅಜಾಗರೂಕತೆ ಯಿಂದ ಬೈಕ್ ಅನ್ನು ತಿರುಗಿಸುವ ಭರದಲ್ಲಿ ಮುಂಭಾಗದಿಂದ ಬರುತ್ತಿದ್ದ ಕಾರೊಂದಕ್ಕೆ ಪರಸ್ಪರ ಡಿಕ್ಕಿ ಹೊಡೆದು ಬೈಕ್ ಸವಾರನಿಗೆ ಮುಖಕ್ಕೆ ಬಲವಾದ ಏಟು ಬಿದ್ದಿದ್ದರಿಂದ ಆಸ್ಪತ್ರೆಗೆ ಸೇರಿಸಲಾಗಿದೆ.  ಕಾರು ಸವಾರರು ಕೊಪ್ಪದ ನಿವಾಸಿ ಪೂರ್ಣೇಶ್ ಇವರು ಶೃಂಗೇರಿ ಕಡೆಗೆ ಹೋಗುತ್ತಿದ್ದಾಗ ಹರಿಹರಪುರದಲ್ಲಿ ಇವರ ಕಾರಿಗೆ ಬೈಕ್ ಸವಾರ ವಿಜಯೇಂದ್ರ ರಭಸವಾಗಿ ಗುದ್ದಿದ್ದಾರೆ.  ಪೂರ್ಣೇಶ್ ಕಳಸ ಪೊಲೀಸ್ ಠಾಣೆಯಲ್ಲಿ ಎ.ಎಸ್.ಐ ವೃತ್ತಿಯಲ್ಲಿದ್ದು ಅಪಘಾತವನ್ನು ತಪ್ಪಿಸಲು ಸಲುವಾಗಿ ರಸ್ತೆಯ ಎಡಭಾಗಕ್ಕೆ ಗುಂಡಿ ಇದ್ದ ಕಾರಣ ಇವರ ಕಾರು ರಸ್ತೆಯ ಗುಂಡಿಗೆ ಬಿದ್ದಿ ದ್ದು ಪ್ರಾಣಪಾಯದಿಂದ ಪಾರಾಗಿದ್ದಾರೆ. ಇವರಿಗೆ ಜೀವಕ್ಕೆ ಯಾವುದೇ ತರದಹಾನಿ ಉಂಟಾಗಿಲ್ಲ. ಅಘಾತಕ್ಕೆ ಒಳಗಾದ ಕಾರಿನ ಮುಂಭಾಗ ನಜ್ಜು ಗುಜ್ಜಾಗಿದೆ.  ಬೈಕ್ ಸವಾರ ವಿಜಯೇಂದ್ರ ಹರಿಹರಪುರ ಸಮೀಪ ಕಾರ್ಬೈಲ್ (ಮಾರ್ಡಿ ) ಯವರು ಎಂದು ತಿಳಿಯಲಾಗಿದೆ. ಇವರು ಕೂಡಾ ಹೆಲ್ಮೆಟ್ ಧರಿಸಿದಿದ್ದರಿಂದ ಯಾವುದೇ ರೀತಿಯ ...

" ಹೊಸನಗರ ತಾಲ್ಲೂಕು ಸುಡೂರು ಬಳಿ ಖಾಸಗಿ ಸ್ಲೀಪರ್ ಬಸ್‌ಗೆ ಬೆಂಕಿ"

Image
" ಹೊಸನಗರ ತಾಲ್ಲೂಕು ಸುಡೂರು ಬಳಿ ಖಾಸಗಿ ಸ್ಲೀಪರ್ ಬಸ್‌ಗೆ ಬೆಂಕಿ" ಶಿವಮೊಗ್ಗ  : ಜಿಲ್ಲೆಯ ಹೊಸನಗರದಿಂದ ಬೆಂಗಳೂರಿಗೆ ಹೋಗುತ್ತಿದ್ದ ಖಾಸಗಿ ಸ್ಲೀಪರ್ ಬಸ್ (ನಾನ್-ಎಸಿ) ಮಂಗಳವಾರ ರಾತ್ರಿ (ಜನವರಿ 27, 2026) ಹೊಸನಗರ ತಾಲ್ಲೂಕಿನ ಸುಡೂರು ಬಳಿ ಬೆಂಕಿಗೆ ಆಹುತಿಯಾಗಿದ್ದು, ಹಲವರು ಗಾಯಗೊಂಡಿದ್ದಾರೆ. ಚಾಲಕ ಮತ್ತು ನಿರ್ವಾಹಕ ಸೇರಿದಂತೆ ಮೂವರು ಸುಟ್ಟ ಗಾಯಗಳಿಂದ ಬಳಲುತ್ತಿದ್ದು, ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. 36 ಪ್ರಯಾಣಿಕರನ್ನು ಹೊತ್ತೊಯ್ಯುತ್ತಿದ್ದ ಬಸ್ ಸುಡೂರ್ ಸಮೀಪಿಸುತ್ತಿದ್ದಂತೆ, ಚಾಲಕನ ಕ್ಯಾಬಿನ್‌ನಲ್ಲಿ ಹೊಗೆ ಕಾಣಿಸಿಕೊಂಡಿತು. ರಾತ್ರಿ 10:30 ರ ಸುಮಾರಿಗೆ ಮರಕ್ಕೆ ಡಿಕ್ಕಿ ಹೊಡೆದ ನಂತರ ಚಾಲಕ ಗಾಬರಿಯಿಂದ ಬಸ್ ನಿಲ್ಲಿಸಿದನು. ಇನ್ನೂ ನಿದ್ದೆ ಮಾಡದ ಪ್ರಯಾಣಿಕರು ಕಿಟಕಿಗಳು ಮತ್ತು ತುರ್ತು ನಿರ್ಗಮನ ದ್ವಾರಗಳನ್ನು ತೆರೆದು ವಾಹನದಿಂದ ಹಾರಿದರು. ಚಾಲಕ ಮತ್ತು ಕಂಡಕ್ಟರ್ ಸೇರಿದಂತೆ ಮೂವರು ಸುಟ್ಟ ಗಾಯಗಳಿಂದ ಬಳಲುತ್ತಿದ್ದರೆ, ಇನ್ನು ಕೆಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸ್ಥಳೀಯ ಪೊಲೀಸರು ಮತ್ತು ಅಗ್ನಿಶಾಮಕ ಮತ್ತು ತುರ್ತು ಸೇವೆಗಳ ಸಿಬ್ಬಂದಿ ಸ್ಥಳಕ್ಕೆ ಧಾವಿಸಿದ್ದಾರೆ. ಶಿವಮೊಗ್ಗ ಪೊಲೀಸ್ ವರಿಷ್ಠಾಧಿಕಾರಿ ಬಿ. ನಿಖಿಲ್ ಮಾಧ್ಯಮಕ್ಕೆ ನೀಡಿದ ಮಾಹಿತಿಯ ಪ್ರಕಾರ, ಇದು ಎಸಿ ಇಲ್ಲದ ಬಸ್ ಆಗಿರುವುದರಿಂದ ಪ್ರಯಾಣಿಕರು ಕಿಟಕಿಗಳನ್ನು ತೆರೆದು ವಾಹನದಿಂದ ಜಿಗಿಯಬಹ...

"ಎನ್.ಆ‌ರ್.ಪುರಕ್ಕೆ ಆನೆ ದಂಡು: 26 ಕಾಡಾನೆಗಳಿಂದ ಹೈ ಅಲರ್ಟ್, ಜನರಲ್ಲಿ ತೀವ್ರ ಆತಂಕ!"

Image
"ಎನ್.ಆ‌ರ್.ಪುರಕ್ಕೆ ಆನೆ ದಂಡು: 26 ಕಾಡಾನೆಗಳಿಂದ ಹೈ ಅಲರ್ಟ್, ಜನರಲ್ಲಿ ತೀವ್ರ ಆತಂಕ!" ಎನ್.ಆರ್.ಪುರ: ಚಿಕ್ಕಮಗಳೂರು ಜಿಲ್ಲೆಯ ಮಲೆನಾಡು ಭಾಗದಲ್ಲಿ ಕಾಡಾನೆಗಳ ಉಪಟಳ ನಿರಂತರವಾಗಿದ್ದು, ನರಸಿಂಹರಾಜಪುರ ತಾಲೂಕಿನಲ್ಲಿ ಇದು ತೀವ್ರ ಸ್ವರೂಪ ಪಡೆದುಕೊಂಡಿದೆ. ಕಾಡಾನೆಗಳ ಹಾವಳಿ ಹೆಚ್ಚಾದ ಹಿನ್ನೆಲೆಯಲ್ಲಿ ಅರಣ್ಯ ಇಲಾಖೆ ಹಾಗೂ ಜಿಲ್ಲಾ ಆನೆ ಕಾರ್ಯಪಡೆ ಸಾರ್ವಜನಿಕರಿಗೆ ಹೈ ಅಲರ್ಟ್‌ ಘೋಷಿಸಿದೆ. ತಾಲೂಕಿನ ಹೊರವಲಯದ ಕಡಹಿನಬೈಲು ವ್ಯಾಪ್ತಿಯಲ್ಲಿ ಸುಮಾರು 17 ಕಾಡಾನೆಗಳ ಬೃಹತ್ ಹಿಂಡು ಬೀಡುಬಿಟ್ಟಿದ್ದರೆ, ಮುತ್ತಿನಕೊಪ್ಪ ಬಳಿ 9 ಕಾಡಾನೆಗಳು ಕಾಣಿಸಿಕೊಂಡು ಜನರಲ್ಲಿ ತೀವ್ರ ಆತಂಕ ಮೂಡಿಸಿವೆ. ಒಟ್ಟು 26ಕ್ಕೂ ಅಧಿಕ ಆನೆಗಳು ಈ ಭಾಗದಲ್ಲಿ ಸಂಚರಿಸುತ್ತಿರುವುದರಿಂದ, ಗ್ರಾಮಸ್ಥರು ಹಾಗೂ ವಾಹನ ಸವಾರರು ತೀವ್ರ ಜಾಗೃತಿ ವಹಿಸುವಂತೆ ಇಲಾಖೆ ಮನವಿ ಮಾಡಿದೆ. ಮುಂಜಾನೆ ಮತ್ತು ಸಂಜೆ ವೇಳೆ ತೋಟ ಹಾಗೂ ಕಾಡು ದಾರಿಗಳಲ್ಲಿ ಸಂಚರಿಸುವಾಗ ಹೆಚ್ಚಿನ ಎಚ್ಚರಿಕೆ ವಹಿಸುವುದು ಅಗತ್ಯವಾಗಿದೆ. ಆನೆಗಳು ಕಂಡಲ್ಲಿ ತಕ್ಷಣ ಅರಣ್ಯ ಇಲಾಖೆಯ ಗಮನಕ್ಕೆ ತರುವಂತೆ ಸೂಚಿಸಲಾಗಿದೆ.

"ಹಿಟ್ ಅಂಡ್ ರನ್‌ಗೆ ಗೃಹಿಣಿ ನವಮಿ ಬಲಿ : ಆಲ್ದೂರು ಹಿಂದೂ ಸಮಾಜೋತ್ಸವ ಮುಂದೂಡಿಕೆ..!"

Image
"ಹಿಟ್ ಅಂಡ್ ರನ್‌ಗೆ ಗೃಹಿಣಿ ನವಮಿ ಬಲಿ : ಆಲ್ದೂರು ಹಿಂದೂ ಸಮಾಜೋತ್ಸವ ಮುಂದೂಡಿಕೆ..!" ಚಿಕ್ಕಮಗಳೂರು  : ಜಿಲ್ಲೆಯ ಆಲ್ದೂರುನಲ್ಲಿ ಮೊನ್ನೆ ಬೆಳಿಗ್ಗೆ ರಸ್ತೆ ಅಪಘಾತ ಸಂಭವಿಸಿದೆ. ಟೆಂಪೋ ಟ್ರಾವೆಲರ್ ಒಂದು ಗೃಹಿಣಿ ನವಮಿಗೆ ಡಿಕ್ಕಿ ಹೊಡೆದಿದೆ. ಇದರಿಂದ ನವಮಿ ಸಾವನ್ನಪ್ಪಿದ್ದಾರೆ. ಈ ಸಾವಿನ ಹಿನ್ನಲೆಯಲ್ಲಿ ಇಂದು ಆಲ್ದೂರುನಲ್ಲಿ ನಡೆಯಬೇಕಾಗಿದ್ದ ಹಿಂದೂ ಸಮಾಜೋತ್ಸವವನ್ನು ಮುಂದೂಡಲಾಗಿದೆ. ಚಿಕ್ಕಮಗಳೂರು ತಾಲ್ಲೂಕಿನ ಆಲ್ದೂರು ಬಳಿ ರಸ್ತೆ ಅಪಘಾತ ಸಂಭವಿಸಿ ಗೃಹಿಣಿ ನವಮಿ(30) ಮೃತಪಟ್ಟಿದ್ದಾರೆ. ಪ್ರವಾಸಕ್ಕೆ ಬಂದಿದ್ದವರ ಟೆಂಪೋ ಟ್ರಾವೆಲರ್ ಡಿಕ್ಕಿ ಹೊಡೆದು ಗೃಹಿಣಿ ನಮಮಿ ಮೃತಪಟ್ಟಿದ್ದಾರೆ. ಬಳಿಕ ಟೆಂಪೋ ಟ್ರಾವೆಲರ್ ನಿಲ್ಲಿಸದೇ, ಚಾಲಕ ಪರಾರಿಯಾಗಿದ್ದಾನೆ. ಮೃತಪಟ್ಟ ನವಮಿ ಆಲ್ದೂರು ಕೃಷಿ ಪತ್ತಿನ ಸಹಕಾರ ಸಂಘದಲ್ಲಿ ಉದ್ಯೋಗದಲ್ಲಿದ್ದರು. ಆಲ್ದೂರು ಪೊಲೀಸ್ ಠಾಣೆಯಲ್ಲಿ ಈ ಅಪಘಾತದ ಬಗ್ಗೆ ಕೇಸ್ ದಾಖಲಾಗಿದ್ದು ಪೊಲೀಸರು ಅಪಘಾತ ಮಾಡಿದ ವಾಹನಕ್ಕಾಗಿ ಹುಡುಕಾಟ ನಡೆಸಿದ್ದಾರೆ. ಟೆಂಪೋ ಟ್ರಾವೆಲರ್ ನಂಬರ್ ಸಿಕ್ಕಿದ್ದು, ಅದಕ್ಕಾಗಿ ಹುಡುಕಾಟ ನಡೆಸಿದ್ದಾರೆ. ತುಮಕೂರು ಜಿಲ್ಲೆಯ ತಿಪಟೂರು ಆರ್‌ಟಿಓ ರಿಜಿಸ್ಟ್ರೇಷನ್ ಆಗಿರುವ ಟೆಂಪೋ ಟ್ರಾವೆಲರ್ ಅಪಘಾತವೆಸಗಿ ಸ್ಥಳದಿಂದ ಪರಾರಿಯಾಗಿದೆ.  ಆಲ್ದೂರು ಗ್ರಾಮದ ಬಳಿ ನಡೆದ ಹಿಟ್ ಅಂಡ್ ರನ್ ನಲ್ಲಿ ಗೃಹಿಣಿ ನವಮಿ ಮೃತಪಟ್ಟ ಹಿನ್ನಲೆಯಲ್ಲಿ ಮೊನ್...

ಓವರ್ ಟೇಕ್ ಭರದಲ್ಲಿ ಬಸ್ ಗೆ ಬೈಕ್ ಢಿಕ್ಕಿ! ಬೈಕ್ ಸವಾರ ಬಲಿ..!

Image
ಓವರ್ ಟೇಕ್ ಭರದಲ್ಲಿ ಬಸ್ ಗೆ ಬೈಕ್ ಢಿಕ್ಕಿ! ಬೈಕ್ ಸವಾರ ಬಲಿ..! ಕುಂದಾಪುರ : ಓವರ್ ಟೇಕ್ ಮಾಡುವ ಭರದಲ್ಲಿ ಖಾಸಗಿ ಬಸ್ ಗೆ ಮುಖಾಮುಖಿ ಢಿಕ್ಕಿ ಹೊಡೆದ ಪರಿಣಾಮ ಬೈಕ್ ಸವಾರ ಯುವಕನೋರ್ವ ಸ್ಥಳದಲ್ಲೇ ಮೃತಪಟ್ಟ ದಾರುಣ ಘಟನೆ ಶನಿವಾರ ಶೆಟ್ರಕಟ್ಟೆ ತಿರುವಿನಲ್ಲಿ ನಡೆದಿದೆ. ತ್ರಾಸಿಯಲ್ಲಿ ಫಾಸ್ಟ್ ಫುಡ್ ಅಂಗಡಿ ಹೊಂದಿದ್ದ ವಿಜಯ್ ಶನಿವಾರ ಬೆಳಿಗ್ಗೆ ಬೈಕಿನಲ್ಲಿ ತ್ರಾಸಿಯಿಂದ ಸೌಕೂರು ಕಡೆಗೆ ತೆರಳುತ್ತಿದ್ದಾಗ ಶೆಟ್ರಕಟ್ಟೆ ತಿರುವಿನಲ್ಲಿ ಖಾಸಗಿ ಬಸ್ ಅನ್ನು ಓವರ್ ಟೇಕ್ ಮಾಡುವ ಭರದಲ್ಲಿ ಎದುರಿನಿಂದ ಬರುತ್ತಿದ್ದ ಇನ್ನೊಂದು ಖಾಸಗಿ ಬಸ್ ಗೆ ಮುಖಾಮುಖಿ ಢಿಕ್ಕಿ ಹೊಡೆದಿದೆ. ಢಿಕ್ಕಿಯ ರಭಸಕ್ಕೆ ವಿಜಯ್ ಗಂಭೀರ ಗಾಯಗಳೊಂದಿಗೆ ಸ್ಥಳದಲ್ಲೇ ಕೊನೆಯುಸಿರಿಳೆದಿದ್ದಾರೆ.

" ಕೊಪ್ಪ. ಬಾಳೆಹೊನ್ನೂರು. ಜಯ ಪುರ. ಮೂಡಿಗೆರೆ ಠಾಣೆಯ P.S.I ಗಳ ವರ್ಗಾವಣೆ..!"

Image
" ಕೊಪ್ಪ. ಬಾಳೆಹೊನ್ನೂರು. ಜಯ ಪುರ. ಮೂಡಿಗೆರೆ ಠಾಣೆಯ P.S.I ಗಳ ವರ್ಗಾವಣೆ..!" ಚಿಕ್ಕಮಗಳೂರು: ಜಿಲ್ಲೆಯಲ್ಲಿರುವ ಕೆಲವು ಪೊಲೀಸ್ ಠಾಣೆಗಳ ಪಿ ಎಸ್ ಐ ಅಧಿಕಾರಿಗಳ ಬದಲಾವಣೆ ಮಾಡಲಾಗಿದೆ. ಅದರಲ್ಲಿ  ಜಯಪುರ, ಬಾಳೆಹೊನ್ನೂರು, ಮೂಡಿಗೆರೆ, ಸೇರಿದಂತೆ P.S.I ಗಳ ವರ್ಗಾವಣೆಗೊಳಿಸಲಾಗಿತ್ತು. ಪಶ್ಚಿಮ ವಲಯದ ಪಿ.ಎಸ್‌.ಐ ರವರನ್ನು ವರ್ಗಾವಣೆಗೊಳಿಸಿದ ಸ್ಥಳಕ್ಕೆ ತಕ್ಷಣದಿಂದ ಜಾರಿಗೆ ಬರುವಂತೆ ಸಾರ್ವಜನಿಕ ಹಿತದೃಷ್ಟಿ ಮತ್ತು ಆಡಳಿತಾತ್ಮಕ ಕಾರಣಗಳಿಗಾಗಿ ಮುಂದಿನ ಆದೇಶವರೆಗೆ ವರ್ಗಾವಣೆಗೊಳಿಸಿ ಆದೇಶಿಸಲಾಗಿದೆ. ಇದೀಗ ಕೊಪ್ಪದ ಪಿ.ಎಸ್‌.ಐ ಅವರು ವರ್ಗಾವಣೆಗೊಂಡಿದ್ದಾರೆ. ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಠಾಣೆಯ ಬಸವರಾಜ ಜಿ.ಕೆ ಅವರನ್ನು ಡಿ.ಸಿ.ಆರ್‌.ಬಿ ಘಟಕ ದಕ್ಷಿಣ ಕನ್ನಡ ಜಿಲ್ಲೆ ಠಾಣೆಗೆ ದಕ್ಷಿಣ ಕನ್ನಡ ಜಿಲ್ಲೆ ಠಾಣೆಯ ಮಧು ಬಿ.ಇ., ಅವರನ್ನು ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಜಯಪುರ ಠಾಣೆಯ ಪಿ.ಎಸ್‌.ಐ ಅಂಬರೀಷ ಅವರನ್ನು ಬಾಳೆಹೊನ್ನೂರು ಠಾಣೆಗೆ ಹಾಗೂ ಬಾಳೆಹೊನ್ನೂರು ಠಾಣೆಯ ಪಿ.ಎಸ್‌.ಐ ರವೀಶ ಅವರನ್ನು ಜಯಪುರ ಠಾಣೆಗೆ ವರ್ಗಾವಣೆ ಮಾಡಲಾಗಿದೆ. ಮೂಡಿಗೆರೆ ಠಾಣೆಯ ಪಿ.ಎಸ್‌.ಐ ಶ್ರೀನಾಥ್ ರೆಡ್ಡಿ ಅವರನ್ನು ಗೋಣಿಬೀಡು ಠಾಣೆಗೆ ಮತ್ತು ಗೋಣಿಬೀಡು ಠಾಣೆಯ ಪಿ.ಎಸ್‌.ಐ ಹರ್ಷವರ್ಧನ ಹೆಚ್.ಕೆ ಅವರನ್ನು ಮೂಡಿಗೆರೆ ಠಾಣೆಗೆ ನಿಯುಕ್ತಿಗೊಳಿಸಿ ಆದೇಶ ಹೊರಡಿಸಲಾಗಿದೆ.

ಧಾರವಾಡ ಯುವತಿ ಕೊಲೆ ಪ್ರಕರಣ: ಆರೋಪಿಯ ಬಂಧನ; S.P.ಸ್ಪೋಟಕ ಮಾಹಿತಿ..!

Image
ಧಾರವಾಡ ಯುವತಿ ಕೊಲೆ ಪ್ರಕರಣ: ಆರೋಪಿಯ ಬಂಧನ; S.P.ಸ್ಪೋಟಕ ಮಾಹಿತಿ..! ಧಾರವಾಡ : ನಿನ್ನೆ ನಡೆದ ಯುವತಿಯ ಹತ್ಯೆ ಪ್ರಕರಣಕ್ಕೆ ಟ್ವಿಸ್ಟ್ ಸಿಕ್ಕಿದ್ದು, ಆರೋಪಿ ಹತ್ಯೆ ಮಾಡಿ ಸ್ಥಳದಲ್ಲಿದ್ದ ಎಂಬ ಸ್ಪೋಟಕ ಮಾಹಿತಿ ತನಿಖೆಯಿಂದ ಹೊರಬಂದಿದೆ. ಇದೀಗ ಆತನನ್ನೇ ಧಾರವಾಡ ಗ್ರಾಮೀಣ ಠಾಣೆಯ ಪೊಲೀಸರು ಬಂಧಿಸಿದ್ದಾರೆ. ಧಾರವಾಡದ ಹೊರವಲಯದಲ್ಲಿ ಯುವತಿಯ ಶವವೊಂದು ಹತ್ಯೆಯಾದ ರೀತಿಯಲ್ಲಿ ಪತ್ತೆಯಾಗಿತ್ತು. ಝಕಿಯಾ ಮುಲ್ಲಾ (21) ಹತ್ಯೆಯಾದ ಯುವತಿ. ಆಕೆಯ ಆತ್ಮೀಯ ಸ್ನೇಹಿತ ಸಾಬೀರ್ ಮುಲ್ಲಾ ಎಂಬಾತ ವೇಲ್​ನಿಂದ ಕತ್ತು ಹಿಸುಕಿ ಆಕೆಯನ್ನು ಕೊಲೆ ಮಾಡಿದ್ದಾನೆ ಎಂಬುದು ಪೊಲೀಸರ ತನಿಖೆಯಿಂದ ಗೊತ್ತಾಗಿದೆ. ಈ ಕುರಿತು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಗುಂಜನ್ ಆರ್ಯ ಅವರು ಮಾತನಾಡಿದ್ದು, ‘ಮೃತ ಯುವತಿಯ ಸ್ನೇಹಿತ ಸಾಬೀರ್ ಎಂಬಾತ ಕಳೆದ ಮೂರ್ನಾಲ್ಕು ವರ್ಷಗಳಿಂದ ಆ ಹುಡುಗಿಯೊಂದಿಗೆ ಸಂಪರ್ಕದಲ್ಲಿದ್ದ. ನಮಗೆ ಬಂದ ಮಾಹಿತಿ ಪ್ರಕಾರ ಅವರ ಕುಟುಂಬಸ್ಥರಿಗೆ ಇವರಿಬ್ಬರ ಮದುವೆ ಮಾಡುವುದಕ್ಕೆ ಇಷ್ಟ ಇತ್ತು. ಈ ವಿಚಾರವಾಗಿ ಸ್ವಲ್ಪ ಅಸಮಾಧಾನ ಬಂದಿದೆ. ಹೀಗಾಗಿ 20ನೇ ತಾರೀಖು ಸಾಬೀರ್ ಝಕಿಯಾ ಅವರನ್ನು ಹತ್ಯೆ ಮಾಡಿದ್ದಾನೆ. ನಿನ್ನೆ ರಾತ್ರಿ 12 ಗಂಟೆಗೆ ತಾಂತ್ರಿಕ ದಾಖಲೆ ಆಧಾರದ ಮೇಲೆ ಸಾಬೀರ್​ನನ್ನು ಬಂಧಿಸಿದ್ದೇವೆ’ ಎಂದು ಮಾಹಿತಿ ನೀಡಿದರು. ‘ಕೊಲೆ ಪ್ರಕರಣದಲ್ಲಿ ಒಬ್ಬರ ಪಾತ್ರ ಕಂಡುಬರುತ್ತಿದೆ. ಆದರೆ, ನಮ್ಮ ತನಿಖೆ ಯಾವಾಗಲ...

"ಮುಸ್ಲಿಂ ಯುವತಿಯನ್ನು ಕೊಂದು ಶವ ಬಿಸಾಡಿ ಹೋದ ದುಷ್ಕರ್ಮಿಗಳು..!"

Image
"ಮುಸ್ಲಿಂ ಯುವತಿಯನ್ನು ಕೊಂದು ಶವ ಬಿಸಾಡಿ ಹೋದ ದುಷ್ಕರ್ಮಿಗಳು..!" ಧಾರವಾಡ: ಪ್ಯಾರಾಮೆಡಿಕಲ್ ಶಿಕ್ಷಣ ಮುಗಿಸಿ ಉದ್ಯೋಗಕ್ಕಾಗಿ ಹುಡುಕಾಟ ನಡೆಸುತ್ತಿದ್ದ 19 ವರ್ಷದ ವಿದ್ಯಾರ್ಥಿನಿಯೋರ್ವಳು ಬರ್ಬರವಾಗಿ ಹತ್ಯೆಗೀಡಾಗಿದ್ದಾಳೆ. ನಿನ್ನೆ ಲ್ಯಾಬ್‌ಗೆ ಹೋಗಿದ್ದ ಝಕಿಯಾ ಮುಲ್ಲಾ ಶವ ಇಂದು ಬೆಳಗ್ಗೆ ನಗರದ ಹೊರವಲಯದಲ್ಲಿ ಪತ್ತೆಯಾಗಿದೆ. ಮೃತ ವಿದ್ಯಾರ್ಥಿನಿ ಧಾರವಾಡದ ಗಾಂಧಿ ಚೌಕ್ ನಿವಾಸಿಯಾಗಿದ್ದ 19 ವರ್ಷದ ಝಕಿಯಾ ಮುಲ್ಲಾ ಎಂದು ತಿಳಿದುಬಂದಿದೆ. ಮಂಗಳವಾರ ಸಂಜೆ ಮನೆಯಿಂದ ಲ್ಯಾಬ್‌ಗೆ ಹೋಗಿ ಬರುವುದಾಗಿ ಹೇಳಿ ತೆರಳಿದ್ದ ವಿದ್ಯಾರ್ಥಿನಿ, ರಾತ್ರಿಯಾದರೂ ಮನೆಗೆ ಹಿಂದಿರುಗಿರಲಿಲ್ಲ. ಇದರಿಂದ ಆತಂಕಗೊಂಡ ಕುಟುಂಬಸ್ಥರು ಹುಡುಕಾಟ ನಡೆಸುತ್ತಿದ್ದರು. ಇಂದು ಮುಂಜಾನೆ ಮನಸೂರು ರಸ್ತೆಯ ಶಾಸಕ ವಿನಯ್ ಕುಲಕರ್ಣಿ ಅವರಿಗೆ ಸೇರಿದ ವಿನಯ್ ಡೈರಿ ಸಮೀಪ ವಿದ್ಯಾರ್ಥಿನಿಯ ಶವ ಪತ್ತೆಯಾಗಿದೆ. ಬೇರೆ ಕಡೆ ವಿದ್ಯಾರ್ಥಿನಿಯನ್ನು ಕೊಲೆ ಮಾಡಿ, ನಂತರ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಇಲ್ಲಿಗೆ ತಂದು ಶವವನ್ನು ಬಿಸಾಡಿ ಹೋಗಿರುವ ಶಂಕೆ ವ್ಯಕ್ತವಾಗಿದೆ. ಸ್ಥಳಕ್ಕೆ ಧಾರವಾಡ ಗ್ರಾಮೀಣ ಹಾಗೂ ವಿದ್ಯಾಗಿರಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸುತ್ತಿದ್ದಾರೆ. ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸುತ್ತಿದ್ದು ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಮರಣೋತ್ತರ ಪರೀಕ್ಷೆ ವ...

ಮದುವೆಗೂ ಮುನ್ನ ಮೊಮ್ಮಗಳಿಗೆ ಗಂಡು ಮಗು ಜನನ: ಹಸುಗೂಸಿನ ಕತ್ತು ಹಿಸುಕಿ ತಿಪ್ಪೆಗೆಸೆದ ಅಜ್ಜಿ..!!

Image
ಮದುವೆಗೂ ಮುನ್ನ ಮೊಮ್ಮಗಳಿಗೆ ಗಂಡು ಮಗು ಜನನ: ಹಸುಗೂಸಿನ ಕತ್ತು ಹಿಸುಕಿ ತಿಪ್ಪೆಗೆಸೆದ ಅಜ್ಜಿ..!! ಚಿಕ್ಕಮಗಳೂರು: ಜಿಲ್ಲೆಯ   ತರೀಕೆರೆಯಲ್ಲಿ ಕುಟುಂಬದ ಗೌರವಕ್ಕಾಗಿ ನವಜಾತ ಶಿಶುವನ್ನು ಕೊಲೆ ಮಾಡಿದ ಹೃದಯವಿದ್ರಾವಕ ಘಟನೆ ಬೆಳಕಿಗೆ ಬಂದಿದೆ. ಮದುವೆಗೂ ಮುನ್ನ ಗರ್ಭಿಣಿಯಾಗಿದ್ದ ಸ್ಟಾಫ್ ನರ್ಸ್‌ ಒಬ್ಬರು, 15 ದಿನಗಳ ಹಿಂದೆ ಮನೆಯಲ್ಲೇ ಹೆರಿಗೆ ಮಾಡಿಸಿಕೊಂಡಿದ್ದಾಳೆ. ವಿಷಯ ಹೊರಗೆ ತಿಳಿಯಬಾರದೆಂಬ ಕಾರಣಕ್ಕೆ ಮಗು ಹುಟ್ಟಿದ ತಕ್ಷಣ ಅಜ್ಜಿ ಕತ್ತು ಹಿಸುಕಿ ಕೊಂದಿದ್ದಾಳೆ. ನಂತರ ಮಗುವಿನ ದೇಹವನ್ನು ತಿಪ್ಪೆ ಗುಂಡಿಯಲ್ಲಿ ಹೂತಿಡಲಾಗಿತ್ತು. ಅನುಮಾನಗೊಂಡ ಸ್ಥಳೀಯರೊಬ್ಬರು ಪೊಲೀಸರಿಗೆ ಮಾಹಿತಿ ನೀಡಿದಾಗ, ಘಟನೆ ಬೆಳಕಿಗೆ ಬಂದು ಮೃತದೇಹ ಪತ್ತೆಯಾಗಿದೆ.

ಸೌದಿ ಅರೇಬಿಯಾದಲ್ಲಿ ನಡೆದ ಕಾರು ಅಪಘಾತ : ಕೋಟೇಶ್ವರದ ಯುವಕ ಮೃತ್ಯು…!!

Image
ಸೌದಿ ಅರೇಬಿಯಾದಲ್ಲಿ ನಡೆದ ಕಾರು ಅಪಘಾತ : ಕೋಟೇಶ್ವರದ ಯುವಕ ಮೃತ್ಯು…!! ಕುಂದಾಪುರ : ಸೌದಿ ಅರೇಬಿಯಾದಲ್ಲಿ ಮಂಗಳವಾರ ಸಂಭವಿಸಿದ ರಸ್ತೆ ಅಪಘಾತದಲ್ಲಿ ಕುಂದಾಪುರ ಮೂಲದ ಯುವಕ ಸೇರಿದಂತೆ ಇಬ್ಬರು ಮೃತಪಟ್ಟಿದ್ದಾರೆ. ನಜ್ರಾನ್ ಅಭಾ ಹೆದ್ದಾರಿಯಲ್ಲಿ ಎರಡು ಕಾರುಗಳ ನಡುವೆ ಸಂಭವಿಸಿದ ಮುಖಾಮುಖಿಯಲ್ಲಿ ಒಂದು ಕಾರಿನಲ್ಲಿದ್ದ ಕುಂದಾಪುರ ಸಮೀಪದ ಕೋಟೇಶ್ವರ ಮೆಜಸ್ಟಿಕ್ ಹಾಲ್‌ನ ಪಾಲುದಾರ ಇರ್ಷಾದ್ ಅವರ ಏಕೈಕ ಪುತ್ರ ಉಮರ್ ಅಹಮ್ಮದ್ ಶೇಖ್ (25) ಹಾಗೂ ಕೇರಳ ಮೂಲದ ಇನ್ನೊಬ್ಬ ಯುವಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.ಕಾರಿನಲ್ಲಿದ್ದ ಇನ್ನಿಬ್ಬರ ಸ್ಥಿತಿ ಗಂಭೀರವಾಗಿದೆ. ಸೌದಿ ಅರೇಬಿಯಾದ ಸೆಂಟರ್ ಪಾಯಿಂಟ್ ಕಂಪನಿಯಲ್ಲಿ ಉದ್ಯೋಗದಲ್ಲಿದ್ದ ಈ ನಾಲ್ವರು ಕೆಲಸದ ನಿಮಿತ್ತ ಅಭಾಕ್ಕೆ ಪ್ರಯಾಣಿಸುತ್ತಿದ್ದರು. ಸೌದಿ ಪ್ರಜೆಯ ಕಾರಿಗೆ ಡಿಕ್ಕಿ ಹೊಡೆದು ಈ ಅಪಘಾತ ಸಂಭವಿಸಿದೆ. ಮೃತರ ಸಂಬಂಧಿಕರು ಹಾಗೂ ಸಾಮಾಜಿಕ ಕಾರ್ಯಕರ್ತರು ಅಫಘಾತ ನಡೆದ ಸ್ಥಳಕ್ಕೆ ತೆರಳಿದ್ದು, ಮೃತದೇಹವನ್ನು ಸ್ಥಳೀಯ ಆಸ್ಪತ್ರೆಯ ಶವಾಗಾರದಲ್ಲಿಡಲಾಗಿದೆ. ಹಾಗೂ ಮೃತರ ಕುಟುಂಬವನ್ನು ಗಾಯಾಳು ಸೌದಿ ಅರೇಬಿಯಾ ಸರಕಾರ ಸಂಪರ್ಕಿಸಿದ್ದು, ಮುಂದಿನ ಕ್ರಮಕ್ಕೆ ಅನುವು ಮಾಡಿಕೊಟ್ಟಿದೆ.

"ರಿಪ್ಪನ್ ಪೇಟೆ ಸಮೀಪ ಎರಡು ಬೈಕ್ ನಡುವೆ ಭೀಕರ ಅಪಘಾತ...!"

Image
"ರಿಪ್ಪನ್ ಪೇಟೆ ಸಮೀಪ ಎರಡು ಬೈಕ್ ನಡುವೆ ಭೀಕರ ಅಪಘಾತ...!" ಹೊಸನಗರ : ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ರಿಪ್ಪನ್‌ಪೇಟೆ ಸಮೀಪದ ದೂನ ಪ್ರದೇಶದಲ್ಲಿ ಭೀಕರ ರಸ್ತೆ ಅಪಘಾತ ಸಂಭವಿಸಿದ್ದು, ಎರಡು ಬೈಕ್‌ಗಳ ನಡುವೆ ನಡೆದ ಮುಖಾಮುಖಿ ಡಿಕ್ಕಿಯಲ್ಲಿ ಇಬ್ಬರು ಸವಾರರು ಗಂಭೀರವಾಗಿ ಗಾಯಗೊಂಡಿದ್ದಾರೆ. ದೂನ ಸಮೀಪದ ನರ್ಸರಿ ಮುಂಭಾಗದಲ್ಲಿ ಟಿ.ವಿ.ಎಸ್ ಎಕ್ಸೆಲ್ ಮತ್ತು ಬಜಾಜ್ ಪಲ್ಸರ್ ಬೈಕ್‌ಗಳ ನಡುವೆ ಈ ದುರ್ಘಟನೆ ನಡೆದಿದೆ. ಅಪಘಾತದ ತೀವ್ರತೆಗೆ, ಟಿವಿಎಸ್ ಎಕ್ಸೆಲ್ ಬೈಕ್ ಸವಾರರಾದ ಗುಬ್ಬಿಗ ಗ್ರಾಮದ ಸತ್ಯನಾರಾಯಣ್‌ ಭಟ್ ಅವರ ತಲೆಗೆ ಗಂಭೀರ ಗಾಯಗಳಾಗಿವೆ. ಮತ್ತೊಂದೆಡೆ, ಪಲ್ಸರ್ ಬೈಕ್‌ನಲ್ಲಿ ಪ್ರಯಾಣಿಸುತ್ತಿದ್ದ ಹೊಸನಗರ ಸಮೀಪದ ಜಯನಗರ ನಿವಾಸಿ ರಾಕೇಶ್ (27)ಎಂಬುವರ ಕಾಲು ಮುರಿತವಾಗಿದೆ. ಗಾಯಗೊಂಡ ಇಬ್ಬರು ಸವಾರರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಬೆಟ್ಟಿಂಗ್ ಕಟ್ಟಿ 19 `ಬಿಯರ್' ಕುಡಿದ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳು ಸಾವು.!

Image
ಬೆಟ್ಟಿಂಗ್ ಕಟ್ಟಿ 19 `ಬಿಯರ್' ಕುಡಿದ ಇಬ್ಬರು ಸಾಫ್ಟ್ ವೇರ್ ಎಂಜಿನಿಯರ್ ಗಳು ಸಾವು.! ಆಂಧ್ರಪ್ರದೇಶ : ಬೆಟ್ಟಿಂಗ್ ಕಟ್ಟಿ 19 ಬಿಯರ್ ಕುಡಿದು ಇಬ್ಬರು ಸಾಫ್ಟ್‌ ವೇರ್ ಉದ್ಯೋಗಿಗಳು ಸಾವನ್ನಪ್ಪಿದ ಘಟನೆ ಆಂಧ್ರಪ್ರದೇಶದ ಅನ್ನಮಯ್ಯ ಜಿಲ್ಲೆಯ ಕೆ.ವಿ.ಪಲ್ಲಿ ಮಂಡಲದ ಬಂಡ ಪಾಡಿಪಲ್ಲಿಯಲ್ಲಿ ನಡೆದಿದೆ. ರಾಯಚೋಟಿ ಡಿಎಸ್‌ಪಿ ಕೃಷ್ಣಮೋಹನ್ ಸಾವಿಗೆ ಕಾರಣ ಅತಿಯಾದ ಮದ್ಯಪಾನ ಎಂದು ಹೇಳಿದ್ದಾರೆ. ಸಂಕ್ರಾಂತಿ ಹಬ್ಬದ ಸಂದರ್ಭದಲ್ಲಿ ಆರು ಸ್ನೇಹಿತರು ಪಾರ್ಟಿ ಆಯೋಜಿಸಿದ್ದರು. ಈ ಪಾರ್ಟಿಯ ಸಮಯದಲ್ಲಿ, ಮಣಿಕುಮಾರ್ (34) ಮತ್ತು ಪುಷ್ಪರಾಜ್ (26) ಎಂಬ ಇಬ್ಬರು ಸಾಫ್ಟ್‌ವೇರ್ ಉದ್ಯೋಗಿಗಳು ಪರಸ್ಪರ ಪೈಪೋಟಿ ನಡೆಸಿ ಮದ್ಯಪಾನ ಮಾಡಿದ್ದರು. ಕಳೆದ ಶನಿವಾರ ಮಧ್ಯಾಹ್ನ 3 ರಿಂದ ಸಂಜೆ 7.30 ರವರೆಗೆ ಇಬ್ಬರೂ ಒಟ್ಟಿಗೆ ಒಟ್ಟು 19 ಬಡ್‌ ವೈಸರ್ ಟಿನ್ ಬಿಯರ್‌ಗಳನ್ನು ಕುಡಿದಿದ್ದಾರೆ ಎಂದು ಪೊಲೀಸರು ಕಂಡುಕೊಂಡರು. ಅತಿಯಾದ ಮದ್ಯಪಾನದಿಂದಾಗಿ ತೀವ್ರ ನಿರ್ಜಲೀಕರಣದಿಂದ ಬಳಲುತ್ತಿದ್ದ ಇಬ್ಬರ ಸ್ಥಿತಿ ಹದಗೆಟ್ಟಿತು. ತಕ್ಷಣ ಆಸ್ಪತ್ರೆಗೆ ಸಾಗಿಸುವಾಗ ಮಣಿಕುಮಾರ್ ದಾರಿಯಲ್ಲಿ ಸಾವನ್ನಪ್ಪಿದರೆ, ಪುಷ್ಪರಾಜ್ ಚಿಕಿತ್ಸೆ ಪಡೆಯುವಾಗ ನಿಧನರಾದರು. ಪ್ರಾಥಮಿಕ ತನಿಖೆ ಮತ್ತು ಮರಣೋತ್ತರ ವರದಿಯಲ್ಲಿ ಸಾವಿಗೆ ಕಾರಣ ಅತಿಯಾದ ಮದ್ಯಪಾನ ಎಂದು ತಿಳಿದುಬಂದಿದೆ ಎಂದು ಪೊಲೀಸರು ಬಹಿರಂಗಪಡಿಸಿದ್ದಾರೆ.

"ತಾಯಿಯನ್ನು ಕೊಲೆಗೈದ ಪ್ರಕರಣದಿಂದ ಮಗನ ಖುಲಾಸೆ...!"

Image
"ತಾಯಿಯನ್ನು ಕೊಲೆಗೈದ ಪ್ರಕರಣದಿಂದ ಮಗನ ಖುಲಾಸೆ...! " ಚಿಕ್ಕಮಗಳೂರು: ತನ್ನ ತಾಯಿಯನ್ನೇ ಕೊಲೆ ಮಾಡಿದ ಆರೋಪ ಎದುರಿಸುತ್ತಿದ್ದ ಬಾಲಕನನ್ನು ಪ್ರಕರಣದಿಂದ ಖುಲಾಸೆಗೊಳಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಕರ್ನಾಟಕ ಹೈಕೋರ್ಟ್ ಎತ್ತಿಹಿಡಿದಿದೆ. ಈ ಆದೇಶವನ್ನು ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಮೇಲ್ಮನವಿಯನ್ನು ನ್ಯಾಯಮೂರ್ತಿಗಳಾದ ಎಚ್‌.ಪಿ. ಸಂದೇಶ್ ಮತ್ತು ಟಿ. ವೆಂಕಟೇಶ್ ನಾಯ್ಕ ಅವರಿದ್ದ ವಿಭಾಗೀಯ ಪೀಠವು ವಜಾಗೊಳಿಸಿದೆ. ಆರೋಪಿಯನ್ನು ಅಪರಾಧಕ್ಕೆ ಲಿಂಕ್ ಮಾಡುವ ಬಲವಾದ ಸಾಕ್ಷ್ಯಾಧಾರಗಳನ್ನು ಒದಗಿಸಲು ಪ್ರಾಸಿಕ್ಯೂಷನ್ ವಿಫಲವಾಗಿದೆ ಎಂದು ನ್ಯಾಯಾಲಯ ಅಭಿಪ್ರಾಯಪಟ್ಟಿದೆ. ಘಟನೆಗೆ ಸಂಬಂಧಿಸಿದಂತೆ, ಕೊಲೆ ಮಾಡಲು 19 ಗಂಟೆಗಳ ಹಿಂದೆ ಬಳಸಲಾದ ಆಯುಧವನ್ನು ವಿಧಿವಿಜ್ಞಾನ ಪ್ರಯೋಗಾಲಯಕ್ಕೆ ಕಳುಹಿಸಿಲ್ಲ ಹಾಗೂ ವಶಪಡಿಸಿಕೊಂಡಿದ್ದ ಚಾಕುವಿನಲ್ಲಿದ್ದ ರಕ್ತದ ಕಲೆಯ ಬಗ್ಗೆ ಯಾವುದೇ ವೈಜ್ಞಾನಿಕ ವರದಿಗಳನ್ನು ಸಲ್ಲಿಸಲಾಗಿಲ್ಲ ಎಂಬುದು ಗಮನಾರ್ಹವಾಗಿದೆ. 2015ರಲ್ಲಿ ಚಿಕ್ಕಮಗಳೂರು ಅಜ್ಜಂಪುರ ಪೊಲೀಸ್‌ ಠಾಣಾ ವ್ಯಾಪ್ತಿಯಲ್ಲಿ ಈ ಪ್ರಕರಣ ದಾಖಲಾಗಿತ್ತು. ಮೃತರಾದ ಆರತಿ ಬಾಯಿ ಅವರಿಗೆ ಕುಡಿತದ ಚಟವಿದ್ದು, ಮನೆಯಲ್ಲಿ ಪ್ರತಿನಿತ್ಯ ಜಗಳ ನಡೆಯುತ್ತಿತ್ತು ಎನ್ನಲಾಗಿದ್ದು, ಈ ವೇಳೆ ನಡೆದ ಗಲಾಟೆಯಲ್ಲಿ ಮಗ ತಾಯಿಗೆ ಚಾಕುವಿನಿಂದ ಇರಿದು ಕೊಲೆ ಮಾಡಿದ್ದಾನೆ ಪ್ರಕರಣದ ವಿಚಾರಣೆ ನಡೆಸಿದ ಬಾಲನ್ಯಾಯ ಮಂಡಳಿಯು ಬಾಲಕ...

ಸ್ವಚ್ಛತೆ ಕಾಪಾಡದ ಪಿಜಿಗಳಿಗೆ ಶಾಕ್ ನೀಡಿದ ಅಧಿಕಾರಿಗಳು..!"

Image
"ಸ್ವಚ್ಛತೆ ಕಾಪಾಡದ ಪಿಜಿಗಳಿಗೆ ಶಾಕ್ ನೀಡಿದ ಅಧಿಕಾರಿಗಳು..!" ಬೆಂಗಳೂರಿನಲ್ಲಿ ಸ್ವಚ್ಛತೆ ಕಾಪಾಡದ ಪೇಯಿಂಗ್ ಗೆಸ್ಟ್ (ಪಿಜಿ) ಮಾಲೀಕರಿಗೆ ಬಿಬಿಎಂಪಿ ಭಾರಿ ಬಿಸಿ ಮುಟ್ಟಿಸಿದೆ. ನಗರದ ವಿವಿಧೆಡೆ ದಾಳಿ ನಡೆಸಿದ ಅಧಿಕಾರಿಗಳು, ನಿಯಮ ಉಲ್ಲಂಘಿಸಿದ ಪಿಜಿಗಳಿಗೆ ಬರೋಬ್ಬರಿ 1.96 ಲಕ್ಷ ರೂಪಾಯಿ ದಂಡ ವಿಧಿಸಿದ್ದಾರೆ. ಸರಿಯಾದ ತ್ಯಾಜ್ಯ ವಿಲೇವಾರಿ ಮಾಡದ ಮತ್ತು ಅಶುಚಿಯಾಗಿರಿಸಿದ್ದ ಪಿಜಿಗಳ ವಿರುದ್ಧ ಈ ಕ್ರಮ ಕೈಗೊಳ್ಳಲಾಗಿದೆ. ಸಾರ್ವಜನಿಕ ಆರೋಗ್ಯದ ದೃಷ್ಟಿಯಿಂದ ಮುಂದಿನ ದಿನಗಳಲ್ಲಿ ತಪಾಸಣೆ ಇನ್ನಷ್ಟು ತೀವ್ರಗೊಳಿಸುವುದಾಗಿ ಪಾಲಿಕೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.