"ಪ್ರೀತಿಗೆ ಅಡ್ಡಿಯಾದ ಎಂಬ ಕಾರಣಕ್ಕೆ ಪ್ರಿಯತಮೆಯ ಬಾವನನ್ನ ಮುಗಿಸಿದ ಪ್ರಿಯಕರ.."
"ಪ್ರೀತಿಗೆ ಅಡ್ಡಿಯಾದ ಎಂಬ ಕಾರಣಕ್ಕೆ ಪ್ರಿಯತಮೆಯ ಬಾವನನ್ನ ಮುಗಿಸಿದ ಪ್ರಿಯಕರ.."
ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲ್ಲೂಕು ಜಯಪುರ ಪೊಲೀಸ್ ಠಾಣಾ ವ್ಯಾಪ್ತಿಗೆ ಬರುವ ಕಲ್ಕೆರೆ ಗ್ರಾಮದ ತೆಂಗಿನ ಮನೆ ಎಂಬಲ್ಲಿ ಘಟನೆ ನಡೆದಿದೆ.
ಪ್ರೀತಿಗೆ ಅಡ್ಡಿ ಅರೋಪ ವ್ಯಕ್ತಿಯ ಕೊಲೆ ರಾಜೇಶ್(27) ಕೊಲೆಯಾದ ವ್ಯಕ್ತಿ
ಜಯಪುರ ಸಮೀಪದ ತೆಂಗಿನಮನೆಯ ಕಲ್ಕೆರೆ ಗ್ರಾಮದಲ್ಲಿ ಘಟನೆ:
ವರುಣ್ ಪೂಜಾರಿ ಎಂಬಾತನಿಂದ ರಾಜೇಶ್ ಕೊಲೆ. ರಾಜೇಶ್ ಪತ್ನಿಯ ಸಹೋದರಿಯನ್ನ(ನಾದನಿ)ಯನ್ನು ವರುಣ್ ಪ್ರೀತಿಸುತ್ತಿದ್ದ.ವರುಣ್ ಪೂಜಾರಿ ಹಾಗೂ ರಾಜೇಶ್ ಇಬ್ಬರ ನಡುವೆ ಫೋನ್ ಮುಖಾಂತರ ಆಗಾಗ್ಗೆ ಇಬ್ಬರ ನಡುವೇ ಜಗಳ ನಡೆಯುತ್ತಲೇ ಇರುತ್ತಿದ್ದು ಭಾನುವಾರ ದಿನ ಇದು ಅತಿರೇಕಕ್ಕೆ ಹೋಗಿ ಇದು ಸೋಮವಾರ ಕೊಲೆಯಲ್ಲಿ ಅಂತ್ಯವಾಗಿದೆ.
ರಾಜೇಶ್ ಮೂಲತಃ ಬಾಳೆಹೊನ್ನೂರು ಸಮೀಪದ ಬಾಸಪುರ. ವರುಣ್ ಪೂಜಾರಿ ಶಿವಮೊಗ್ಗ ಜಿಲ್ಲೆಯ ತೀರ್ಥಹಳ್ಳಿಯ ಮಂಡಗದ್ದೆ ಯಾವನಾಗಿದ್ದು.ವರುಣ್ ರಾಜೇಶ್ ನನ್ನು ತೆಂಗಿನ ಮನೆಯ ಕಲ್ಕೆರೆಯ ಪತ್ನಿ ಮನೆಗೆ ಬರಲು ರಾಜೇಶ್ನನ್ನು ಪ್ರೆರೇಪಿಸಿದ್ದ ಎಂದು ಹೇಳಲಾಗಿದೆ.
ಸೋಮವಾರ ದಿನ ಬೆಳಿಗ್ಗೆ ಅರುಣ್ ಪೂಜಾರಿ ರಾಜೇಶನ ಅತ್ತೆ ಮನೆಯಾದ ತೆಂಗಿನ ಮನೆಯಲ್ಲಿ ಇಬ್ಬರಿಗೂ ಜಗಳ ವಾಗಿ ಅರುಣಪೂಜಾರಿ ರಾಜೇಶನನ್ನು ಚಾಕುವಿನಿಂದ ಇರಿದು ಕೊಲೆಮಾಡಿ ಪರಾರಿ ಯಾಗಿದ್ದಾನೆ. ಹಳ್ಳೆಗೋಳಗಾ ದ.ರಾಜೇಶ್ ನನ್ನುಅಸ್ಪತ್ರೆಗೆ ರವಾನಿಸಿದ್ರು ಚಿಕಿತ್ಸೆ ಫಲಕಾರಿಯಾಗದೇ ಸಾವನ್ನಪ್ಪಿದ ತೀರ್ಥಹಳ್ಳಿ ತಾಲೂಕಿನ ಮಂಡಗದ್ದೆ ಮೂಲದ ವರುಣ್ ಕೊಲೆ ಆರೋಪಿಯಾಗಿದ್ದಾನೆ.
ಈ ಪ್ರಕರಣ ಜಯಪುರ ಪೊಲೀಸ್ ಠಾಣೆಯಲ್ಲಿ ದಾಖಲು ಆರೋಪಿಗಾಗಿ ಪೊಲೀಸರ ತನಿಖೆ ಚಿರುಕುಗೊಳಿಸಲಾಗಿದ್ದು ನಿಖರ ವಾದ ಕಾರಣ ಇನ್ನೂ ತಿಳಿದುಬಂದಿಲ್ಲ ಹೆಚ್ಚಿನ ತನಿಖೆ ಜಯಪುರ ಪೊಲೀಸ್ ಠಾಣಾಧಿಕಾರಿಗಳ ತನಿಖೆ ಯಿಂದ ತಿಳಿಯಬೇಕಾಗಿದೆ.
Comments
Post a Comment