ಮಲೆನಾಡಿನಲ್ಲಿ ಗುಡುಗು,ಮಿಂಚು ಸೇರಿ ಧಾರಾಕಾರ ಮಳೆಗೆ ಉರುಳಿ ಬಿದ್ದ ಮರ ಟ್ರಾಫಿಕ್ ಜಾಮ್..!
ಮಲೆನಾಡಿನಲ್ಲಿ ಗುಡುಗು,ಮಿಂಚು ಸೇರಿ ಧಾರಾಕಾರ ಮಳೆಗೆ ಉರುಳಿ ಬಿದ್ದ ಮರ ಟ್ರಾಫಿಕ್ ಜಾಮ್..!
ಚಿಕ್ಕಮಗಳೂರು: ಜಿಲ್ಲೆಯ ಮಲೆನಾಡು ಭಾಗದಲ್ಲಿ ಕೆಲವು ದಿನಗಳಿಂದ ಗುಡುಗು,ಸಿಡಿಲು ಮಿಂಚು ಸಭಾವಿಸುತ್ತಿದ್ದೂ ಇಂದು ಭಾರಿ ಗಾಳಿ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಕೊಪ್ಪ ಮತ್ತು ಶೃಂಗೇರಿ ತಾಲೂಕಿನ ಹಲವು ಭಾಗಗಳಲ್ಲಿ ಧಾರಾಕಾರ ಮಳೆ ಸುರಿದಿದೆ.
ಕೊಪ್ಪ ತಾಲ್ಲೂಕು ಜಯಪುರ ಗುಡ್ಡೆತೋಟದ ಬಳಿ ರಸ್ತೆಗೆ ಬೃಹತ್ ಮರವೊಂದು ಉರುಳಿ ಬಿದ್ದ ಪರಿಣಾಮ ಶೃಂಗೇರಿ-ಹೊರನಾಡು ಸಂಪರ್ಕ ಕಡಿತಗೊಂಡು, ಕಿಲೋಮೀಟರ್ಗಟ್ಟಲೆ ಟ್ರಾಫಿಕ್ ಜಾಮ್ ಉಂಟಾಗಿದೆ.
ಮರ ತೆರವು ಕಾರ್ಯಾಚರಣೆ ನಡೆಯುತ್ತಿದ್ದು, ಪ್ರಯಾಣಿಕರು ಪರದಾಡುತ್ತಿದ್ದಾರೆ.
Comments
Post a Comment